ಡಾ.ಕೆ ಸುಧಾಕರ್‌‌ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ, ಎಣ್ಣೆಗೆ ನೂಕುನುಗ್ಗಲು

Prasthutha|

ನೆಲಮಂಗಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಗೆದ್ದು ನೂತನ ಸಂಸದರಾಗಿ ಆಯ್ಕೆಯಾಗಿರುವ ಡಾ.ಕೆ ಸುಧಾಕರ್‌‌ಗೆ ನೆಲಮಂಗಲದ ಹೊರವಲಯದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮದ್ಯ, ಮಾಂಸದೂಟಕ್ಕೆ ಜನರು ಮುಗಿಬಿದ್ದ ಘಟನೆ ನಡೆದಿದೆ.

- Advertisement -

ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತರು, ಬೆಂಬಲಿಗರಿಗೆ ಭರ್ಜರಿ ಬಾಡೂಟ (ಮಾಂಸದೂಟ) ಮಾಡಿಸಲಾಗಿತ್ತು. ನೆಲಮಂಗಲ ಅಲ್ಲದೇ ಚಿಕ್ಕಬಳ್ಳಾಪುರ ಬೇರೆ ಬೇರೆ ಕಡೆಯಿಂದ ಬೈಕ್‌ಗಳಲ್ಲಿ ಸಮಾವೇಶಕ್ಕೆ ಸಾವಿರಾರು ಜನರು ಬಂದಿದ್ದ. ಕಾರ್ಯಕ್ರಮ ನಡೆಯುವಾಗಲೇ ಜನರು ಬಾಡೂಟಕ್ಕೆ ಮುಗಿಬಿದ್ದಿದ್ದಾರೆ. ಇದರಿಂದಾಗಿ ನೂಕುನುಗ್ಗಲು ಉಂಟಾಗಿದೆ. ಜನರುಬಎಣ್ಣೆಗೂ ಮುಗಿಬಿದ್ದಿದ್ದು, ಈ ವೇಳೆ ನೂಕಾಟ ತಳ್ಳಾಟ ನಡೆಯಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.



Join Whatsapp