ಧ್ವಂಸವನ್ನು ಸಂಭ್ರಮಿಸಬೇಡಿ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್

Prasthutha|

ನವದೆಹಲಿ:  ಧ್ವಂಸವನ್ನು ಸಂಭ್ರಮಿಸಬೇಡಿ, ಇದು ತಿರುಗುಬಾಣವಾಗಬಹುದು ಎಂದು ಉತ್ತರಪ್ರದೇಶ ಸರಕಾರದ ಬುಲ್ಡೋಝರ್ ರಾಜಕೀಯದ ವಿರುದ್ಧ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟೀಕಿಸಿದ್ದಾರೆ.

- Advertisement -

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, “ಇನ್ನೊಬ್ಬರ ಮನೆ ಕೆಡುವುದಕ್ಕೆ ಸಂಭ್ರಮಿಸಬೇಡಿ. ಬುಲ್ಡೋಝರ್ ನಿಮ್ಮ ಮನೆಗಳಿಗೂ ಬರಬಹುದು. ಕೆಡಹುವಿಕೆ ಸರಿಯಾದ ರೀತಿಯಲ್ಲಾದರೆ ಸ್ವಾಗತ. ಅನ್ಯಾಯವಿದ್ದರೆ ವಿರೋಧಿಸಬೇಕು. ಇಂದು ಅವರಿಗೆ ಸಂಭವಿಸಿದ್ದು ನಾಳೆ ನಿಮಗೂ ಸಂಭವಿಸಬಹುದು”ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಸಂವಿಧಾನ,ಕಾನೂನನ್ನು  ದುರ್ಬಲಗೊಳಿಸುವುದಾದರೆ ಒಂದು ಹಂತದಲ್ಲಿ ಎಲ್ಲರಿಗೂ ಕಷ್ಟ ಎದುರಾಗುತ್ತದೆ ಎಂದೂ ಗೆಹ್ಲೋಟ್ ಎಚ್ಚರಿಸಿದರು.

Join Whatsapp