ನಾಯಿಗೆ ಕಾರು ಡಿಕ್ಕಿ: ಜಗಳ ತೆಗೆದು ಗುಂಡು ಹಾರಿಸಿದ ಯುವಕ ಪೊಲೀಸ್ ವಶಕ್ಕೆ

Prasthutha|

ಬೆಂಗಳೂರು: ನಾಯಿಗೆ ಕಾರು ಡಿಕ್ಕಿ ಹೊಡೆದ ವಿಚಾರಕ್ಕೆ ಕಿರಿಕ್ ಮಾಡಿಕೊಂಡ ಯುವಕನೊಬ್ಬ ವ್ಯಕ್ತಿಯೊಬ್ಬರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿ ಸಾತನೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಕನಕಪುರ ತಾಲೂಕಿನ ಕಪನಿಗೌಡನದೊಡ್ಡಿಯ ಕಾರ್ತಿಕ್ (24) ಬಂಧಿತ ಆರೋಪಿಯಾಗಿದ್ದು ಆತನ ಜೊತೆಗಿದ್ದು ಪರಾರಿಯಾಗಿರುವ ಮತ್ತೊಬ್ಬ ಪರಮೇಶ್ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ರಾಮನಗರ ಎಸ್ ಪಿ ಗಿರೀಶ್ ತಿಳಿಸಿದ್ದಾರೆ.

- Advertisement -


ಕಾರ್ತಿಕ್ ಬಂದೂಕಿನಿಂದ ಹಾರಿಸಿದ ಗುಂಡಿನ ದಾಳಿಯಿಂದ ನಗರದ ವ್ಯಕ್ತಿಯೊಬ್ಬರು ಅದೃಷ್ಟವಶಾತ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ.ಕಪನಿಗೌಡನದೊಡ್ಡಿಯಲ್ಲಿ ಪ್ರದೀಪ್ ಎಂಬುವವರ ನಾಯಿಗೆ ನಗರದ ವ್ಯಕ್ತಿಯೊಬ್ಬರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಈ ವಿಚಾರವಾಗಿ ಜಗಳ ತೆಗೆದ ಪ್ರದೀಪ್ ಕಾರಿನಲ್ಲಿದ್ದ ವ್ಯಕ್ತಿಯ ಜೊತೆಗೆ ಜಗಳ ಮಾಡಿದ್ದಾನೆ.


ಈ ವೇಳೆ ಪ್ರದೀಪ್ ನ ಪರಿಚಯಸ್ಥನಾಗಿದ್ದ ಕಾರ್ತಿಕ್ ಆಕ್ರಮವಾಗಿ ಖರೀದಿಸಿದ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಸುದ್ದಿ ತಿಳಿದ ತಕ್ಷಣವೇ ಕಾರ್ಯಾಚರಣೆಗೆ ಇಳಿದ ಸಾತನೂರು ಠಾಣೆ ಪೊಲೀಸರು, ತಕ್ಷಣ ಕಾರ್ತಿಕ್ನನ್ನು ಬಂಧಿಸಿ ಆತನ ಬಳಿಯಿದ್ದ ಅಕ್ರಮ ಬಂದೂಕನ್ನೂ ವಶಪಡಿಸಿಕೊಂಡಿದ್ದಾರೆ.
ಕಾರ್ತಿಕ್ ಜೊತೆ ಇದ್ದ ಮತ್ತೊಬ್ಬ ಪರಮೇಶ್ ಎಂಬಾತ ಪರಾರಿಯಾಗಿದ್ದು ಆತನ ಪತ್ತೆಗೆ ಶೋಧ ನಡೆಸಲಾಗಿದೆ.



Join Whatsapp