ಚಹಾ ನೀಡಿಲ್ಲ ಎಂದು ಶಸ್ತ್ರಚಿಕಿತ್ಸೆ ಅರ್ಧಕ್ಕೆ ಬಿಟ್ಟು ಹೊರ ನಡೆದ ವೈದ್ಯ

Prasthutha|

ನಾಗ್ಪುರ: ಕುಡಿಯಲು ಚಹಾ ನೀಡಿಲ್ಲ ಎಂಬ ಕಾರಣದಿಂದ ಸಿಟ್ಟಾಗಿ ವೈದ್ಯರೊಬ್ಬರು ಶಸ್ತ್ರಚಿಕಿತ್ಸೆ ಅರ್ಧಕ್ಕೆ ಬಿಟ್ಟು ಅಪರೇಷನ್ ಥಿಯೇಟರ್ ನಿಂದ ಹೊರ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

- Advertisement -


ಶುಕ್ರವಾರದಂದು ಎಂಟು ಮಹಿಳೆಯರು ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಗಾಗಿ ನಾಗ್ಪುರದ ಖಾತ್ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ವೈದ್ಯ ತೇಜ್ರಾಮ್ ಭಲವಿ ಮೊದಲಿಗೆ ನಾಲ್ಕು ಆಪರೇಷನ್ ಯಶಸ್ವಿಯಾಗಿ ಮಾಡಿದ್ದರು. ಬಳಿಕ ಉಳಿದ ನಾಲ್ಕು ಮಹಿಳೆಯರ ಶಸ್ತ್ರ ಚಿಕಿತ್ಸೆಗಾಗಿ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅವರಿಗೆ ಅರಿವಳಿಕೆ ಚುಚ್ಚುಮದ್ದು ಕೂಡ ನೀಡಲಾಗಿತ್ತು. ಈ ವೇಳೆ, ವೈದ್ಯ ಭಲವಿ ಕುಡಿಯಲು ಚಹಾ ತರುವಂತೆ ಸಿಬ್ಬಂದಿಗೆ ಹೇಳಿದ್ದಾರೆ.

ಆದರೇ, ಯಾರೊಬ್ಬರು ಚಹಾ ತಂದು ಕೊಡದೇ ಇರುವ ಕಾರಣ ಕೋಪಗೊಂಡ ವೈದ್ಯ ಶಸ್ತ್ರಚಿಕಿತ್ಸೆಯನ್ನು ಅರ್ಧದಲ್ಲೇ ಬಿಟ್ಟು ಆಪರೇಷನ್ ಥಿಯೇಟರ್ನಿಂದ ಹೊರ ಹೋಗಿದ್ದಾರೆ. ಬಳಿಕ ಶಸ್ತ್ರ ಚಿಕಿತ್ಸೆಗಾಗಿ ಮತ್ತೊಬ್ಬ ವೈದ್ಯರ ಕರೆಯಿಸಿ ಆಪರೇಷನ್ ಮಾಡಿಸಲಾಗಿದೆ. ವೈದ್ಯರ ಈ ನಡತೆಯಿಂದ ಅಸಮಾಧಾನಗೊಂಡ ಮಹಿಳೆಯರ ಕುಟುಂಬಸ್ಥರು ಅವರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.



Join Whatsapp