ಬಿಜೆಪಿಗೆ ಮತ ಹಾಕಿದರೆ ಅಧಿಕಾರಕ್ಕೆ ಬರುವುದು ಎರಡನೇ ಕಿಮ್ ಜಾಂಗ್ ಉನ್: ರಾಕೇಶ್ ಟಿಕಾಯತ್

Prasthutha|

- Advertisement -

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನದ ನಂತರ ರೈತ ಮುಖಂಡ ರಾಕೇಶ್ ಟಿಕಾಯತ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿಗೆ ಮತ ಹಾಕಿದರೆ ಎರಡನೇ ಕಿಮ್ ಜಾಂಗ್ ಉನ್ ಅಧಿಕಾರಕ್ಕೆ ಬರಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಜನರನ್ನು ಅರ್ಥಮಾಡಿಕೊಂಡು ಅವರ ಪರವಾಗಿ ನಿಲ್ಲುವ ಮುಖ್ಯಮಂತ್ರಿ ಬೇಕೋ? ಅಥವಾ ಎರಡನೇ ಕಿಮ್ ಜಾಂಗ್ ಉನ್ ಬೇಕೋ ಎಂಬುದನ್ನು ಜನತೆ ನಿರ್ಧರಿಸಬೇಕು. ಭಾರತದಲ್ಲಿ ಯಾವುದೇ ರಾಜ್ಯ ಸರ್ವಾಧಿಕಾರಿಗಳ ಆಳ್ವಿಕೆಗೆ ಒಳಗಾಗುವುದನ್ನು ಯಾರೂ ಬಯಸುವುದಿಲ್ಲ. ಮತದಾನದ ಹಕ್ಕನ್ನು ಬುದ್ಧಿವಂತಿಕೆಯಿಂದ ಚಲಾಯಿಸಲು ನಾವು ಜನರನ್ನು ಒತ್ತಾಯಿಸುತ್ತೇವೆ ಎಂದು ಟಿಕಾಯತ್ ಹೇಳಿದರು.



Join Whatsapp