ನೂತನ ಎಐಸಿಸಿ ಅಧ್ಯಕ್ಷ ಖರ್ಗೆಯನ್ನು ಅವಮಾನಿಸುವಂತೆ ಟ್ವೀಟ್ ಮಾಡಿದ ಡಿ ಎಂ ಕೆ ಮುಖಂಡ ಅಮಾನತು

Prasthutha|

ಚೆನ್ನೈ: ಇತ್ತೀಚೆಗೆ ನೂತನವಾಗಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೀಯಾಳಿಸಿ ಟ್ವೀಟ್ ಮಾಡಿದ್ದಕ್ಕೆ ಡಿ ಎಂ ಕೆ ಮುಖಂಡರೋರ್ವರನ್ನು ಪಕ್ಷವು ಅಮಾನತುಗೊಳಿಸಿದೆ.

- Advertisement -

ತಮಿಳುನಾಡಿನ ದ್ರಾವಿಡ ಮುನ್ನೇತ್ರಂ ಕಾಳಗಂ (ಡಿಎಂಕೆ) ಪಕ್ಷದ ಮುಖಂಡ ಕೆ ಎಸ್ ರಾಧಾಕೃಷ್ಣನ್ ಎಂಬುವವರನ್ನು ಅಮಾನತುಗೊಳಿಸಲಾಗಿದ್ದು, ಎಲ್ಲಾ ಹುದ್ದೆಗಳಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಡಿ ಎಂ ಕೆ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ ತಿಳಿಸಿದ್ದಾರೆ.

ರಾಧಾಕೃಷ್ಣನ್ . ಮನಮೋಹನ್ ಸಿಂಗ್ 2.0 ಆಗಿ ಆಯ್ಕೆಯಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆಗಳು ಎನ್ನುವ ಶೀರ್ಷಿಕೆಯಡಿಯಲ್ಲಿ ಖರ್ಗೆ ಅವರ ಮಾರ್ಪಡಿಸಿದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

- Advertisement -

ಮಹಾತ್ಮ ಗಾಂಧಿ ಕುಟುಂಬಕ್ಕೆ ಮನಮೋಹನ್ ಸಿಂಗ್  ಕೈಗೊಂಬೆಯಾಗಿದ್ದರು. ಖರ್ಗೆ ಕೂಡಾ ಮಾಜಿ ಪ್ರಧಾನಿಯನ್ನೇ ಅನುಸರಿಸಲಿದ್ದಾರೆ  ಎಂದು ಅವರು ಟ್ವೀಟ್ ಮಾಡಿದ್ದರು. ಡಿಎಂಕೆ ಮುಖಂಡ ಎಮ್ ಕೆ ಸ್ಟಾಲಿನ್ , ಸಂಸದೆ ಕನಿಮೊಳಿ ಮತ್ತಿತರ ಕೆಲವು ಡಿಎಂಕೆ ನಾಯಕರು ಖರ್ಗೆಯನ್ನು ಅಭಿನಂದಿಸಿರುವಾಗ ರಾಧಾಕೃಷ್ಣನ್ ನಡೆಯ ಬಗ್ಗೆ ವ್ಯಾಪಕ ವಿರೋಧದ ಬಳಿಕ ಆ ಟ್ವೀಟನ್ನು ಅಳಿಸಿದ್ದಾರೆ.

ರಾಧಾಕೃಷ್ಣನ್ ನಡೆ ನಮ್ಮ ಪಕ್ಷದ ವರ್ಚಸ್ಸನ್ನು ಕುಗ್ಗಿಸುತ್ತಿದೆ ಎಂದು ಡಿ ಎಂ ಕೆ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ ಹೇಳಿದ್ದಾರೆ.

Join Whatsapp