ನಿಲ್ಲದ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲಿನ ಅವಾಂತರ: ಕರುಗೆ ರೈಲು ಡಿಕ್ಕಿ, ಇಂಜಿನ್’ಗೆ ಹಾನಿ

Prasthutha|

ಚೆನ್ನೈ: ಮೈಸೂರು – ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು ಕರುವಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಇಂಜಿನ್’ಗೆ ಹಾನಿಯಾಗಿರುವ ಘಟನೆ ತಮಿಳುನಾಡಿನ ಅರಕ್ಕೋಣಂ’ನಲ್ಲಿ ನಡೆದಿದೆ.

- Advertisement -

ವಂದೇ ಭಾರತ್ ಎಕ್ಸ್’ಪ್ರೆಸ್’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಒಂದೇ ವಾರದಲ್ಲಿ ಈ ಅಪಘಾತ ನಡೆದಿರುವುದು ವಿಶೇಷ. ಪ್ರತಿ ಗಂಟೆಗೆ 90 ಕಿ.ಮೀ ಶರವೇಗದಲ್ಲಿ ಬಂದ ರೈಲು ಕರುವಿಗೆ ಡಿಕ್ಕಿ ಹೊಡೆದ ಪರಿಣಾಮ ಕರು ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಕಳೆದ ಅಕ್ಟೋಬರ್ ನಿಂದ ಇಲ್ಲಿಯ ತನಕ ವಂದೇ ಭಾರತ್ ಐದನೇ ಬಾರಿಗೆ ಅಪಘಾತವಾಗಿದ್ದು, ಈ ಹಿಂದೆ ಉತ್ತರ ಭಾರತದ ಹಲವೆಡೆ ವಂದೇ ಭಾರತ್ ರೈಲು ಹಸು, ಎಮ್ಮೆ, ಎತ್ತುಗೆ ಡಿಕ್ಕಿ ಹೊಡೆದಿತ್ತು.

- Advertisement -

ಮುಂದಿನ ದಿನಗಳಲ್ಲಿ ರೈಲಿಗೆ ಪ್ರಾಣಿಗಳು ಅಡ್ಡಬರುವುದನ್ನು ತಪ್ಪಿಸಲು ರೈಲ್ವೇ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಕರುವಿನ ಮಾಲಕರನ್ನು ಪತ್ತೆಹಚ್ಚಿ ಪ್ರಕರಣವನ್ನು ದಾಖಲಿಸಿ ಭಾರಿ ದಂಡವನ್ನು ವಿಧಿಸಲು ಯೋಜನೆ ರೂಪಿಸಿದೆ ಎಂದು ದಕ್ಷಿಣ ರೈಲ್ವೇಯ ಚೆನ್ನೈ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎ ಇಳುಮಲೈ ತಿಳಿಸಿದ್ದಾರೆ.



Join Whatsapp