ದಿನೇಶ್ ಕನ್ಯಾಡಿ ಕೊಲೆ ಆರೋಪಿ ಬಜರಂಗದಳ ಮುಖಂಡನಿಗೆ ಜಾಮೀನು!

Prasthutha|

ಬೆಳ್ತಂಗಡಿ: ದಲಿತ ಯುವಕ ದಿನೇಶ್ ಕನ್ಯಾಡಿ ಕೊಲೆ ಪ್ರಕರಣದ ಮುಖ್ಯ ಆರೋಪಿ ಬಜರಂಗದಳ ಮುಖಂಡ ಡಿ.ಕೃಷ್ಣ ಎಂಬಾತನಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

- Advertisement -

ಕಳೆದ ತಿಂಗಳ ಫೆ.23ರಂದು, ದಿನೇಶ್ ಮೇಲೆ ಜಾಗದ ನೋಂದಣಿ ವಿಚಾರವನ್ನು ಸಾರ್ವಜನಿಕವಾಗಿ ಹೇಳಿದ್ದಾರೆ ಎನ್ನುವ ನೆಪವೊಡ್ಡಿ ಆರೋಪಿ ಕೃಷ್ಣ ಹಲ್ಲೆ ನಡೆಸಿದ್ದ. ಈ ಸಂಬಂಧ ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳೂ ವೈರಲ್ ಆಗಿದ್ದವು. ಗಂಭೀರ ಗಾಯಗೊಂಡಿದ್ದ ದಿನೇಶ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆ.24ರಂದು ದಿನೇಶ್ ಕೊನೆಯುಸಿರೆಳೆದಿದ್ದರು.

ಇದಾದ ಕೆಲವೇ ದಿನಗಳಲ್ಲಿ ಪೊಲೀಸರು ಬಜರಂಗದಳ ಮುಖಂಡ ಕೃಷ್ಣನನ್ನು ಬಂಧಿಸಿದ್ದರು, ಇದೀಗ ಜಿಲ್ಲಾ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ.

Join Whatsapp