ಹೆಣ್ಣಿನ ಬಗ್ಗೆ ಅಗೌರವವಾಗಿ ಮಾತನಾಡುವ ಬಿಜೆಪಿಯವರು ಸಂಸ್ಕೃತಿಯ ಭಂಜಕರು: ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ BJPಯ ಮಾಜಿ ಶಾಸಕ ಸಂಜಯ್ ಪಾಟೀಲ್ ಆಡಿರುವ ಮಾತು ಅಸಹ್ಯದ ಪರಮಾವಧಿ. ಇದು BJPಯವರ ಕೀಳು ಮನಸ್ಥಿತಿಯ ಅನಾವರಣ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

- Advertisement -


ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸಿ.ಟಿ.ರವಿಯವರು RSS ಎಂಬುವುದು ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುವ ಗರಡಿ ಮನೆ ಎಂದಿದ್ದಾರೆ. ಹಾಗಾದರೆ RSS ಗರಡಿ ಮನೆಯಲ್ಲಿ‌ BJP ನಾಯಕರು ಕಲಿಯುವುದು ಈ ಸಂಸ್ಕಾರವನ್ನೇ?ಹೇಳಿ C.T.ರವಿಯವರೆ?. ಮಹಿಳೆಯರ ಬಗ್ಗೆ ಕೀಳಾಗಿ ಮಾತಾಡುವುದು, ಅಸಭ್ಯ ಪದಗಳ ಬಳಸುವುದು RSS ಗರಡಿ ಮನೆಯ ಬಳುವಳಿ ಎನ್ನುವುದಾದರೇ ಸಂಸ್ಕೃತಿ ಹಾಗೂ ಸಂಸ್ಕಾರ ಎಂಬ ಪದಗಳ ಪಾರಿಭಾಷೆ ಬದಲಿಸಬೇಕು. ಹೆಣ್ಣಿನ ಬಗ್ಗೆ ಗೌರವವೇ ಇಲ್ಲದೆ ಮಾತನಾಡುವ ಬಿಜೆಪಿಯವರು ವಾಸ್ತವವಾಗಿ ಸಂಸ್ಕೃತಿಯ ರಕ್ಷಕರಲ್ಲ..ಸಂಸ್ಕೃತಿಯ ಭಂಜಕರು ಎಂದು ದಿನೇಶ್ ಹರಿಹಾಯ್ದಿದಿದ್ದಾರೆ.


‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ’ ಎಂದು ನಂಬಿರುವ ಸಂಸ್ಕೃತಿ ನಮ್ಮದು. ಈ ದೇಶದ ಮಣ್ಣು ಹೆಣ್ಣಿಗೆ ದೇವತೆಯ ಸ್ಥಾನ ಕಲ್ಪಿಸಿದೆ. ಆದರೆ ಹೆಣ್ಣನ್ನು ಕೀಳಾಗಿ ಕಾಣುವ, ಆಕೆಯ ಬಗ್ಗೆ ಅಸಹ್ಯದ ಮಾತನಾಡುವ ಬಿಜೆಪಿಯವರೆ ನಿಮ್ಮ ಸಂಸ್ಕೃತಿ ಯಾವುದು ಎಂದು ಹೇಳುವಿರಾ? ಎಂದು ದಿನೇಶ್ ಟ್ವೀಟ್ ಮಾಡಿದ್ದಾರೆ.

Join Whatsapp