ಪ್ರತಿಭಟನೆ ನಿರತ ರೈತರು ಫಿಝಾ ತಿಂದಿರುವುದಕ್ಕೆ ವ್ಯಂಗ್ಯವಾಡಿದವರ ವಿರುದ್ಧ ನಟ ದಿಲ್ಜೀತ್ ಖಡಕ್ ಪ್ರತಿಕ್ರಿಯೆ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಯನ್ನು ವಿರೋಧಿಸಿ ದೆಹಲಿ ಗಡಿ ಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಬಿಜೆಪಿ ಬೆಂಬಲಿಗರಿಂದ ಸಾಕಷ್ಟು ವ್ಯಂಗ್ಯ, ಅಪಹಾಸ್ಯ ಮಾಡಲಾಗುತ್ತಿದೆ. ಈ ನಡುವೆ, ರೈತರಿಗೆ ಫಿಝಾ ವಿತರಿಸಿರುವುದೂ ವ್ಯಂಗ್ಯಕ್ಕೆ ಕಾರಣವಾಗಿತ್ತು. ಬಿಜೆಪಿಗರ ಈ ವರ್ತನೆಯ ವಿರುದ್ಧ ಸಿಡಿದೆದ್ದಿರುವ ನಟ-ಗಾಯಕ ದಿಲ್ಜೀತ್ ದೊಸಾಂಜಿ, ಖಡಕ್ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ.

- Advertisement -

“ರೈತರು ವಿಷ ಸೇವಿಸುತ್ತಿರುವ ಬಗ್ಗೆ ಯಾವ ಕಳವಳವೂ ವ್ಯಕ್ತವಾಗುವುದಿಲ್ಲ, ಆದರೆ ರೈತರು ಫಿಝಾ ತಿನ್ನುವುದು ಸುದ್ದಿಯಾಗುತ್ತದೆ’’ ಎಂದು ದಿಲ್ಜೀತ್ ಕಿಡಿಗಾರಿದ್ದಾರೆ. ದಿಲ್ಜೀತ್ ಅವರ ಟ್ವೀಟ್ ಅನ್ನು ರೈತರ ಪರವಾಗಿರುವವರು ದೊಡ್ಡ ಮಟ್ಟದಲ್ಲಿ ಬೆಂಬಲಿಸಿದ್ದಾರೆ.

ದೆಹಲಿ-ಹರ್ಯಾಣ ಗಡಿ ಪ್ರದೇಶವಾದ ಸಿಂಘುವಿನಲ್ಲಿ ಕಳೆದ ವಾರ ರೈತರಿಗೆ ಫಿಝಾ ವಿತರಿಸಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿ ಕೆಲವರು ವ್ಯಂಗ್ಯವಾಡಿದ್ದರು.

- Advertisement -

ಫಿಝಾಗೆ ಹಿಟ್ಟು ನೀಡಿರುವ ರೈತರು ತಮಗಾಗಿ ಒಂದು ತುಂಡು ಕೊಂಡುಕೊಳ್ಳುವಷ್ಟು ಸಮರ್ಥರಿದ್ದಾರೆ ಎಂದು ರೈತರಿಗೆ ಫಿಝಾ ವಿತರಿಸಿದ ನಾಲ್ವರು ಸ್ನೇಹಿತರಲ್ಲಿ ಓರ್ವರಾದ ಶಣ್ಬೀರ್ ಸಿಂಗ್ ಸಂಧು ಹೇಳಿದ್ದಾರೆ.  

Join Whatsapp