ಪ್ರಾಪರ್ಟಿ ವಿಚಾರವಾಗಿ ED ದಾಳಿ | ಯಾವುದೇ ನೋಟಿಸ್ ಕೊಟ್ಟಿಲ್ಲ : ಜಮೀರ್ ಅಹ್ಮದ್ ಸ್ಪಷ್ಟನೆ

Prasthutha|

ಬೆಂಗಳೂರು: ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿರುವ ವಿಚಾರವಾಗಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಮಾತನಾಡಿದ್ದು, ಪ್ರಾಪರ್ಟಿ ವಿಚಾರವಾಗಿ ದಾಳಿ ಮಾಡಲಾಗಿದೆ. ED ಯಾವುದೇ ನೋಟಿಸ್ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
10 ದಿನ ಕಾಲಾವಕಾಶ:ದಾಳಿಯ ವೇಳೆ ಶೇ. 90ರಷ್ಟು ದಾಖಲೆಗಳನ್ನು ಕೊಡಲಾಗಿದೆ. ಕೆಲವೊಂದು ದಾಖಲೆಗಳು ಬ್ಯಾಂಕ್ ನಲ್ಲಿವೆ. ಅದನ್ನು ಹತ್ತು ದಿನಗಳಲ್ಲಿ ಅಕೌಂಟ್ ಮೂಲಕ ಕಳುಹಿಸಿಕೊಡಿ ಎಂದು ಹೇಳಿದ್ದಾರೆ. ಹತ್ತು ದಿನಗಳ ಕಾಲಾವಕಾಶ ಪಡೆದುಕೊಳ್ಳಲಾಗಿದೆ ಎಂದರು.

- Advertisement -


ಪರೋಕ್ಷವಾಗಿ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ನಾಯಕರು ಯಾರೂ ದೂರು ಕೊಟ್ಟಿಲ್ಲ, ದೊಡ್ಡ – ದೊಡ್ಡ ರಾಜಕಾರಣಿಗಳು ದೂರು ಕೊಟ್ಟಿರೋ ಅನುಮಾನ ಇದೆ ಎಂದು ಹೇಳಿದರು. ನಾನು ಬಿಟ್ಟು ಬಂದಿರೋ ಪಕ್ಷದವರು ಮಾಡಿರುವ ಬಗ್ಗೆ ಅನುಮಾನ ಇದೇ ಎಂದು ಪರೋಕ್ಷವಾಗಿ ಹೆಚ್ಡಿಕೆ ಕಡೆ ಬೆರಳು ಮಾಡಿ ಶಾಸಕ ಜಮೀರ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಅಡ್ವೋಕೇಟ್
ಜಮೀರ್ಗೆ ಇಡಿ ಕೇಸ್ ನಿರ್ವಹಣೆಗೆ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಅಡ್ವೋಕೇಟ್ ಎನ್ನಲಾಗುತ್ತಿದ್ದು, ಸಿಬಲ್ ಜೊತೆ ಜಮೀರ್ ಮಾತುಕತೆ ನಡೆಸಿದ್ದಾರೆ. ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಇಡಿ ದಾಳಿ ಪ್ರಕರಣದಲ್ಲಿ ದಾಖಲೆಗಳನ್ನ ಸಲ್ಲಿಸಲು ಇಡಿಯಿಂದ ಮೊದಲ ನೋಟಿಸ್ ಜಾರಿ ಮಾಡಲಾಗಿದೆ ಎಂದು 10 ದಿನಗಳ ಒಳಗಾಗಿ ದಾಖಲೆಗಳನ್ನ ಸಲ್ಲಿಸಲು ಸೂಚನೆ ನೀಡಲಾಗಿದೆ ಎನ್ನುವ ಮಾಹಿತಿ ದೊರೆತಿತ್ತು. ಜಮೀರ್ ಸಂಬಂಧಿತ 15 ಕಡೆ ದಾಳಿ ನಡೆಸಿದ್ದ ಇಡಿ ಸಂಸ್ಥೆ ಕೆಲವೊಂದು ದಾಖಲೆಗಳಿಲ್ಲದ ಆಸ್ತಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ದಾಖಲೆಗಳ ಜೊತೆ ಸ್ಪಷ್ಟನೆ ನೀಡಲು ಸೂಚನ ನೀಡಿದೆ ಎನ್ನಲಾಗಿತ್ತು.

- Advertisement -

ಬಂಬೂ ಬಜಾರ್ ಜಮೀರ್ ಮನೆಯ ಇಂಟೀರಿಯರ್ ಫೋಟೋಸ್ ತೆಗೆದುಕೊಂಡಿದ್ದ ಇಡಿ ಅಧಿಕಾರಿಗಳು, ದುಬಾರಿ ಬೆಲೆಯ ಇಂಟೀರಿಯರ್ ಡೆಕೋರೇಷನ್ , ಪೂರ್ತಿ ಮನೆಯ ಫೋಟೋಸ್ಗಳನ್ನೂ ತೆಗೆದುಕೊಂಡಿದ್ದರು. ಇನ್ನು ಕೆಲವೊಂದು ದಾಖಲಾತಿಗಳು ಸಿಕ್ಕಿದ್ದು, ಉಳಿದ ವಸ್ತುಗಳಿಗೆ ದಾಖಲಾತಿಗಳೇ ಇಲ್ಲ, ಹೀಗಾಗಿ ಹತ್ತು ದಿನಗಳಲ್ಲಿ ಡಾಕ್ಯುಮೆಂಟ್ ಅನ್ನು ಇಡಿ ಕೈಗೆ ಹಸ್ತಾಂತರಿಸಬೇಕು ಎಂದು ತಾಕೀತು ಮಾಡಿದೆ ಎನ್ನುವ ಮಾಹಿತಿ ದೊರೆತಿತ್ತು.

Join Whatsapp