ಗುರುವಾಯೂರ್ ದೇವಸ್ಥಾನದಲ್ಲಿ ಅಡುಗೆ ಕೆಲಸಕ್ಕೆ ಬ್ರಾಹ್ಮಣರೇ ಬೇಕೆಂದು ಸುತ್ತೋಲೆ ಹೊರಡಿಸಿದ ದೇವಸ್ವಂ ಮಂಡಳಿ

Prasthutha|

- Advertisement -

ತಿರುವನಂತಪುರಂ: ಕೇರಳದ ಗುರುವಾಯೂರ್ ದೇವಸ್ಥಾನದಲ್ಲಿ ಅಡುಗೆ ಮಾಡುವವರು ಮತ್ತು ಸಹಾಯಕರು ಬ್ರಾಹ್ಮಣರಾಗಿರಬೇಕು ಎಂದು ದೇವಸ್ವಂ ಮಂಡಳಿ ಸುತ್ತೋಲೆ ಹೊರಡಿಸಿದೆ.

ಫೆಬ್ರವರಿಯಲ್ಲಿ ನಡೆಯಲಿರುವ ದೇವಸ್ಥಾನದ ಉತ್ಸವಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಲಾಗಿತ್ತು.

- Advertisement -

ಅಡುಗೆ ಮಾಡಲು ಬರುವ ಬಾಣಸಿಗರು ಮತ್ತು ಸಹಾಯಕರು ಬ್ರಾಹ್ಮಣರಾಗಿರಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಅಡುಗೆ ಮಾಡಲು ಬರುವವರು ಶುಚಿಯಾಗಿರಬೇಕು ಮತ್ತು ಯಾವುದೇ ಕಳಂಕಗಳಿಲ್ಲದೆ ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Join Whatsapp