ಲಖನಗೌಡ, ಸುಶೀಲಮ್ಮ , ಭಾಸ್ಕರ್ ದಾಸ್ ಎಕ್ಕಾರುಗೆ ದೇವರಾಜ್ ಅರಸು ಪ್ರಶಸ್ತಿ

Prasthutha|

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದೇವರಾಜು ಅರಸು ಪ್ರಶಸ್ತಿ ಪ್ರಕಟಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಬೆಂಗಳೂರಿನಲ್ಲಿಂದು ಮೂರು ವರ್ಷಗಳ ಪ್ರಶಸ್ತಿ ಪ್ರಕಟಿಸಿದರು.

- Advertisement -


2019-20 ನೇ ಸಾಲಿನ ದೇವರಾಜು ಅರಸು ಪ್ರಶಸ್ತಿ ಬೆಳಗಾವಿ ಜಿಲ್ಲೆ ಅಥಣಿಯ ಬಸವಪ್ರಭು ಲಖನಗೌಡ ಪಾಟೀಲ್, 2020-21 ನೇ ಸಾಲಿನ ದೇವರಾಜು ಅರಸು ಪ್ರಶಸ್ತಿಗೆ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಎಸ್ ಜಿ ಸುಶೀಲಮ್ಮ ಹಾಗೂ 2021-22 ನೇ ಸಾಲಿನಪ್ರಶಸ್ತಿಗೆ ಕರ್ನಾಟಕ ಅಲೆಮಾರಿ /ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಕೆ ಭಾಸ್ಕರ್ ದಾಸ್ ಎಕ್ಕಾರು ಆಯ್ಕೆಯಾಗಿದ್ದಾರೆ ಎಂದು ಪೂಜಾರಿ ತಿಳಿಸಿದರು.

Join Whatsapp