ಭ್ರಷ್ಟಾಚಾರದ ಕುರಿತು ಸುದ್ದಿ ಪ್ರಕಟಿಸಿದ ಪತ್ರಕರ್ತನ ಬಂಧನ: ಕಾಲಿಗೆ ಸರಪಳಿ ಹಾಕಿದ ಪೊಲೀಸರು

Prasthutha|

ಭುವನೇಶ್ವರ: ನೀಲಗಿರಿ ಠಾಣಾ ವ್ಯಾಪ್ತಿಯಲ್ಲಿ ಭ್ರಷ್ಟಚಾರದ ಕುರಿತು ಸುದ್ದಿ ಪ್ರಕಟಿಸಿದ ನೆಪದಲ್ಲಿ ಪೊಲೀಸರು ಪತ್ರಕರ್ತನೊಬ್ಬನನ್ನು ಬಂಧಿಸಿದ್ದು, ಆಸ್ಪತ್ರೆಯ ಬೆಡ್ ಗೆ ಸರಪಳಿ ಹಾಕಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

- Advertisement -

ಒರಿಸ್ಸಾದ ಬಾಲಸೋರ್ ಎಂಬಲ್ಲಿ ಲೋಕನಾಥ್ ದಲೇಯ್ ಎಂಬ ಪತ್ರಕರ್ತನ ಕಾಲಿಗೆ ಸರಪಳಿ ಹಾಕಿ ಆಸ್ಪತ್ರೆಯ ಬೆಡ್ ಗೆ ಕಟ್ಟಿರುವುದು ಫೋಟೋದಲ್ಲಿ ಸೆರೆಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಒರಿಸ್ಸಾ ಪೊಲೀಸ್ ಡಿಜಿಪಿ ತನಿಖೆಗೆ ಆದೇಶಿಸಿದ್ದಾರೆ.

Join Whatsapp