ನನ್ನ ವಿರುದ್ಧ ಕಪೋಲಕಲ್ಪಿತ ಕಥೆ ಹೆಣೆದ ದೆಹಲಿ ಪೊಲೀಸರು ಕ್ಷಮೆಯಾಚಿಸಲಿ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ಆಗ್ರಹ

Prasthutha|

ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ ಓಖ್ಲಾ ಶಾಸಕ

- Advertisement -

ನವದೆಹಲಿ: ತನ್ನ ವಿರುದ್ಧ ಕಪೋಲಕಲ್ಪಿತ ಕಥೆಗಳನ್ನು ಹೆಣೆದ ದೆಹಲಿ ಪೊಲೀಸರು ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ ಎಎಪಿ ಶಾಸಕ ಅಮಾನತುಲ್ಲಾ ಖಾನ್, ಈ ಸಂಬಂಧ ಅವರಿಗೆ ನೋಟಿಸ್ ಕಳುಹಿಸಿದ್ದಾರೆ.

ತನಗೆ ಮತ್ತು ಹೆಂಡತಿ, ಮಕ್ಕಳಿಗೆ ಅನವಶ್ಯಕ ಕಿರುಕುಳ, ಗಂಭೀರ ಕಿರುಕುಳ, ಗಂಭೀರ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡಿದಕ್ಕಾಗಿ ಬೇಷರತ್, ಲಿಖಿತ, ಸಾರ್ವಜನಿಕ ಕ್ಷಮೆಯಾಚನೆ ನಡೆಸುವಂತೆ ದೆಹಲಿ ಪೊಲೀಸರಿಗೆ ನೀಡಿದ ನೋಟಿಸ್ ನಲ್ಲಿ ಸೂಚಿಸಿದ್ದಾರೆ.

- Advertisement -

ದೆಹಲಿ ಪೊಲೀಸರು ತನ್ನನು ನಿರಂತರವಾಗಿ ಗುರಿಯಾಗಿಸಿದ್ದರು ಎಂದು ಅಮಾನತುಲ್ಲಾ ಖಾನ್ ಟ್ವೀಟ್ ನಲ್ಲಿ ನಮೂದಿಸಿದ್ದರು.

ತನ್ನ ವಿರುದ್ಧ ಒಟ್ಟು 18 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಖಾನ್ ತಿಳಿಸಿದ್ದಾರೆ.

Join Whatsapp