ಯುಎಇ ದೊರೆಯ ಹೆಸರಿನಲ್ಲಿ ದಿಲ್ಲಿ ಪಂಚ ತಾರಾ ಹೋಟೆಲಿಗೆ ವಂಚನೆ| ಆರೋಪಿ ಬಂಧನ

Prasthutha|

►ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿದ ದೆಹಲಿ ಪೊಲೀಸರು

- Advertisement -

ಹೊಸದಿಲ್ಲಿ: ಯುಎಇ ದೊರೆಯ ಹೆಸರಿನಲ್ಲಿ ದೆಹಲಿಯ ಪಂಚ ತಾರಾ ಹೋಟೆಲಿಗೆ ಪಂಗನಾಮ ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

- Advertisement -

ಘಟನೆ ವಿವರ….

ಮುಹಮ್ಮದ್ ಶರೀಫ್ ಎಂಬಾತ ಆಗಸ್ಟ್’ನಲ್ಲಿ ದೆಹಲಿಯ ಪಂಚತಾರಾ ಹೋಟೆಲಿಗೆ ಬಂದಿದ್ದು, ತಾನು ಯುಎಇ ನಿವಾಸಿ. ಅಬುದಾಬಿ ದೊರೆ ಶೇಖ್ ಫಲಾ ಬಿನ್ ಜಾಯೇದ್ ಅಲ್ ನಹ್ಯಾನ್ ಜೊತೆಗೆ ಇರುವವನು ಎಂದು ಹೇಳಿದ್ದನು.

ಅಬುದಾಬಿ ರಾಜಕುಟುಂಬದ ಕೆಲಸ ಮಾಡುತ್ತಿದ್ದೇನೆ ಎಂದು ದಿಲ್ಲಿ ಪಂಚ ತಾರಾ ಹೋಟೆಲಿನಲ್ಲಿ ನಾಲ್ಕು ತಿಂಗಳು ಉಳಿದಿದ್ದಾನೆ. ಅಂತಿಮವಾಗಿ ರೂ. 23 ಲಕ್ಷ ಬಾಕಿ ಉಳಿಸಿ ಪರಾರಿಯಾಗಿದ್ದನು.
ಆಗಸ್ಟ್ 1ರಂದು ಶರೀಫ್ 427ನೇ ಸಂಖ್ಯೆಯ ಕೊಠಡಿಗೆ ಬಂದಿದ್ದಾನೆ. ನವೆಂಬರ್ 20ರಂದು ಸದ್ದು ಮಾಡದೆ ಹೊರಟು ಹೋಗಿದ್ದಾನೆ. ಒಂದು ಮುತ್ತಿನ ತಟ್ಟೆ, ಹಲವು ಬೆಳ್ಳಿಯ ವಸ್ತುಗಳು ಮೊದಲಾದವನ್ನು ಕಳವು ಮಾಡಿರುವುದಾಗಿ ಹೋಟೆಲಿನ ಸಿಬ್ಬಂದಿ ದೂರಿನಲ್ಲಿ ತಿಳಿಸಿದ್ದಾರೆ. ರೂಮು ಮತ್ತು ಆಹಾರ ಹಾಗೂ ಸೇವೆ ಸೇರಿ ಆತನ ಬಿಲ್ಲು ರೂ. 35 ಲಕ್ಷ ಆಗಿತ್ತು. ಆತನು 11.5 ಲಕ್ಷ ರೂಪಾಯಿ ಮಾತ್ರ ಸಲ್ಲಿಸಿದ್ದ.

ಈ ಕುರಿತು ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಲೀಲಾ ಪ್ಯಾಲೇಸ್ ಹೋಟೆಲ್ ಮ್ಯಾನೇಜರ್ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಾಗಿತ್ತು.
ನಂತರ ಆರೋಪಿಯ ಬಂಧನಕ್ಕೆ ದಿಲ್ಲಿ ಪೊಲೀಸರು ಬಲೆ ಬೀಸಿದ್ದರು.

Join Whatsapp