ದಿಲ್ಲಿ ಮೇಯರ್ ಚುನಾವಣೆ: ಮೂರು ಪ್ರಯತ್ನ ವಿಫಲವಾದ ಬಳಿಕ ಇಂದು ನಾಲ್ಕನೇ ಪ್ರಯತ್ನ

Prasthutha|

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಮೇಯರ್ ಆಯ್ಕೆಯ ನಾಲ್ಕನೆಯ ಪ್ರಯತ್ನ ನಡೆದಿದೆ. ಎಎಪಿ ಮತ್ತು ಬಿಜೆಪಿ ನಡುವೆ ನೇಮಕಾತಿ ಸದಸ್ಯರ ಮತದಾನದ ಪ್ರಶ್ನೆ ವಿವಾದವಾಗಿ ಹಿಂದಿನ ಮೂರು ಬಾರಿಯೂ ಮೇಯರ್ ಆಯ್ಕೆ ಸಾಧ್ಯವಾಗಿರಲಿಲ್ಲ.

- Advertisement -


24 ಗಂಟೆಗಳೊಳಗೆ ಸಭೆ ನಡೆಸಿ ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ದಿನ ಗೊತ್ತು ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ ಬಳಿಕ ಇಂದು ಮೇಯರ್ ಆಯ್ಕೆಗೆ ಸಮಯ ಗೊತ್ತು ಪಡಿಸಲಾಗಿದೆ. ಕಳೆದ ಮೂರು ಬಾರಿ ಮೊಬೈಲ್ ಮಾತು ಜೋರಿದ್ದುದರಿಂದ ಈ ಬಾರಿ ಮೇಯರ್ ಆಯ್ಕೆಯ ಸಭೆಗೆ ಯಾರೂ ಮೊಬೈಲ್ ಒಯ್ಯದಂತೆ ತಡೆಯಲಾಗಿದೆ.
ಹಿಂದೆ ಜನವರಿ 6, ಜನವರಿ 24, ಫೆಬ್ರವರಿ 6ರಂದು ಬಿಜೆಪಿ- ಎಎಪಿ ನಡುವೆ ಗಲಾಟೆ ನಡೆದುದರಿಂದ ಮೇಯರ್ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿತ್ತು. ಇಂದೂ ಬೆಳಿಗ್ಗೆ ಆ ಗದ್ದಲದ ಲಕ್ಷಣ ಕಂಡುಬಂದಿತಾದರೂ ಸುಪ್ರೀಂಕೋರ್ಟ್ ಆದೇಶದಿಂದಾಗಿ ದೊಡ್ಡ ಕಿತ್ತಾಟ ಏನೂ ಕಂಡುಬರಲಿಲ್ಲ.


250 ಸದಸ್ಯರ ಪಾಲಿಕೆಯಲ್ಲಿ 134 ಸ್ಥಾನ ಗೆದ್ದ ಆಮ್ ಆದ್ಮಿ ಪಕ್ಷವು 15 ವರ್ಷಗಳ ಬಿಜೆಪಿ ಆಡಳಿತವನ್ನು ಕೊನೆಗೊಳಿಸಿತ್ತು. ಆದರೆ 104 ಸ್ಥಾನ ಗೆದ್ದಿರುವ ಬಿಜೆಪಿಯು ನೇಮಕಾತಿ ಸದಸ್ಯರ ಮೂಲಕ ಹಾಗೂ ಸಂಸದರ ಮತಗಳನ್ನು ಬಳಸಿ ಮೇಯರ್ ಸ್ಥಾನ ಲಪಟಾಯಿಸಲು ಬಿಜೆಪಿ ಆಟ ಕಟ್ಟಿದೆ.
ಸಿಜೆಐ ಚಂದ್ರಚೂಡ್, ಪಿ. ಎಸ್. ನರಸಿಂಹ, ಜೆ. ಬಿ. ಪರ್ದಿವಾಲಾರಿದ್ದ ಸುಪ್ರೀ ಕೋರ್ಟು ಪೀಠವು ಮೊದಲ ಎಂಸಿಡಿ ಸಭೆಯಲ್ಲಿ ಮೇಯರ್ ಆಯ್ಕೆ ನಡೆಸಿ, ಬೆನ್ನಿಗೇ ಮೇಯರ್ ನೇತೃತ್ವದಲ್ಲಿ ಉಪ ಮೇಯರ್ ಆಯ್ಕೆ ಇತ್ಯಾದಿ ನಡೆಯಬೇಕು ಎಂದು ಆದೇಶಿಸಿದೆ.

Join Whatsapp