ದುಷ್ಕರ್ಮಿಗಳಿಗೂ ಹಿಟ್ಲರ್ ಉದ್ಯೋಗ ಕೊಟ್ಟಿದ್ದ; ಮೋದಿ ನಿಮಗೆ ಏನು ಕೊಟ್ಟಿದ್ದಾನೆ ? ಬಿಜೆಪಿ ಶಾಸಕರಿಗೆ ಕೇಜ್ರಿವಾಲ್ ಪ್ರಶ್ನೆ

Prasthutha|

ನವದೆಹಲಿ: ಪಂಚ ರಾಜ್ಯ ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಹಿಟ್ಲರ್ ಆಡಳಿತದ ಕಾಲದಲ್ಲಿ ದುಷ್ಕರ್ಮಿಗಳಿಗೂ ಉದ್ಯೋಗ ಕೊಟ್ಟಿದ್ದ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟಿದ್ದಾರೆ.
‘ಹಿಟ್ಲರ್ ದುಷ್ಕರ್ಮಿಗಳಿಗೂ ಉದ್ಯೋಗ ಕೊಟ್ಟಿದ್ದ. ಆದರೆ ಅವನು (ಮೋದಿ) ನಿಮಗೆ ಏನು ಕೊಟ್ಟಿದ್ದಾನೆ ?’ ಎಂದು ಬಿಜೆಪಿ ಸದಸ್ಯರನ್ನು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
‘ಕೇಜ್ರಿವಾಲ್ ನಿಮಗಾಗಿ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರಿಗೆ ಕೇಜ್ರಿವಾಲ್ ಔಷಧಿಗಳನ್ನು ನೀಡುತ್ತಿದ್ದಾರೆಯೇ ಹೊರತು, ಮೋದಿ ಅಲ್ಲ ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಕಣ್ಣು ತೆರೆಯಿರಿ, ಬಿಜೆಪಿ ತೊರೆದು ಆಮ್ ಆದ್ಮಿ ಪಕ್ಷವನ್ನು ಸೇರಿಕೊಳ್ಳಿ” ಎಂದು ಬಿಜೆಪಿ ಶಾಸಕರಿಗೆ ಸಲಹೆ ನೀಡಿದರು.

- Advertisement -


ಎಂಟು ವರ್ಷಗಳ ಕಾಲ ದೇಶವನ್ನು ಆಳಿದ ನಂತರವೂ ಪ್ರಧಾನಿ, ‘ರಾಜಕೀಯ ಲಾಭಕ್ಕಾಗಿ ಚಲನಚಿತ್ರದ ಸಹಾಯವನ್ನು ತೆಗೆದುಕೊಳ್ಳಬೇಕಾಗಿದೆ’ ಎಂದು ದೆಹಲಿ ಸಿಎಂ ವ್ಯಂಗ್ಯವಾಡಿದ್ದಾರೆ.
ನೀವು ಏನು ಮಾಡಲು ಬಯಸುತ್ತೀರೋ ಅದನ್ನು ಮಾಡಿ, ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು,
‘ದಿ ಕಾಶ್ಮೀರ ಫೈಲ್ಸ್’ ರೀತಿಯ ಸಿನಿಮಾಗಳ ಪ್ರಚಾರಕ್ಕೆ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥಮಾಡಬೇಡಿ ಎಂದು ನಿಮ್ಮಲ್ಲಿ ಕೈ ಮುಗಿದು ಮನವಿ ಮಾಡಿಕೊಳ್ಳುತ್ತೇನೆ ದಯವಿಟ್ಟು ಮಕ್ಕಳಂತೆ ವರ್ತಿಸಬೇಡಿ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Join Whatsapp