ನವದೆಹಲಿ । ಗೋಹತ್ಯೆ ಶಂಕೆಯಲ್ಲಿ ಸಂಘಪರಿವಾರದಿಂದ ಕಾರ್ಮಿಕನ ಹತ್ಯೆ

Prasthutha|

ನವದೆಹಲಿ: ಫಾರ್ಮ್ ಹೌಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬನನ್ನು ಸಂಘಪರಿವಾರದ ಗುಂಪೊಂದು ಗೋಹತ್ಯೆಯ ಶಂಕೆಯಲ್ಲಿ ಅಮಾನುಷವಾಗಿ ಥಳಿಸಿ ಹತ್ಯೆ ನಡೆಸಿದೆ.

- Advertisement -

ರಾಜಾರಾಮ್ ಎಂಬಾತನೇ ಹತ್ಯೆಯಾದ ವ್ಯಕ್ತಿಯಾಗಿದ್ದು, ಆತನ ಇಬ್ಬರು ಸ್ನೇಹಿತರು ಈ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಸ್ಥಳೀಯ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ್ದು, ಸಂಘಪರಿವಾರದ ಕಾರ್ಯಕರ್ತರಿಂದ ದಾಳಿಗೊಳಗಾದವರು ನೀಡಿದ ದೂರಿನನ್ವಯ ಐವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

- Advertisement -

ಪ್ರಸಕ್ತ ಮೃತರು ಸೇರಿದಂತೆ ಸಂತ್ರಸ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.



Join Whatsapp