ವಿದ್ಯುತ್ ತಂತಿ ತಗುಲಿ ಹಸುಗಳ ಸಾವು

Prasthutha|

ಚಿಕ್ಕಮಗಳೂರು: ವಿದ್ಯುತ್ ತಂತಿ ತಗುಲಿದ ಪರಿಣಾಮ ಎರಡು ಹಸುಗಳು ಸಾವನ್ನಪ್ಪಿರುವ ದುರ್ಘಟನೆ ತಾಲೂಕಿನ ತೊಗರಿಹಂಕಲ್ ಸಮೀಪದ ಹಿರೇಬಿದರೆ ಗ್ರಾಮದಲ್ಲಿ ನಡೆದಿದೆ.

- Advertisement -


ಕೃಷಿಕ ರಮೇಶ್ ಎಂಬವರು ಬೆಳೆಗಳ ರಕ್ಷಣೆಯ ಸಲುವಾಗಿ ತಮ್ಮ ಜಮೀನಿನ ಸುತ್ತ ವಿದ್ಯುತ್ ತಂತಿಗಳನ್ನು ಅಳವಡಿಸಿದ್ದರು, ಆದರೆ ಈ ತಂತಿಗಳು ಅಕ್ರಮ ಎಂಬುದಾಗಿ ಆರೋಪಿಸಿರುವ ಹಸುವಿನ ವಾರಸುದಾರ ಗುರುಮೂರ್ತಿ, ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.


ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Join Whatsapp