ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ, 15 ಜನ ಸಾವು, 27 ಮಂದಿಗೆ ಗಾಯ

Prasthutha|

ಲಕ್ನೋ: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಬಾಬುರಿ ಗ್ರಾಮದಲ್ಲಿ ಬಸ್ಸಿಗೆ ಮರಳು ತುಂಬಿದ ಲಾರಿ ಡಿಕ್ಕಿಯೊಡೆದ ಪರಿಣಾಮ 15 ಜನರು ಸಾವಿಗೀಡಾಗಿ 27 ಮಂದಿ ಗಾಯಗೊಂಡ ಘಟನೆ ನಡೆದಿದೆ.70 ಜನ ಪ್ರಯಾಣಿಕರಿದ್ದ ಬಸ್ಸು ದೆಹಲಿಯಿಂದ ಬಹ್ರೆಜ್ಗೆ ಹೋಗುತ್ತಿತ್ತು. ಪಬೀಡಾಡಿ ದನ ಅಡ್ಡ ಬಂದ ಪರಿಣಾಮ ಬಸ್ ಚಾಲಕ ಬಲಕ್ಕೆ ತಿರುಗಿಸಿದಾಗ ವೇಗವಾಗಿ ಬರುತ್ತಿದ್ದ ಟ್ರಕ್ ಗೆ ಡಿಕ್ಕಿಯಾಯಿತು ಎಂದು ಬಾರಾಬಂಕಿ ಪೊಲೀಸ್ ವರಿಷ್ಠಾಧಿಕಾರಿ ಯಮುನಾ ಪ್ರಸಾದ್ ತಿಳಿಸಿದ್ದಾರೆ.

- Advertisement -


ಸ್ಥಳದಲ್ಲೇ 9 ಜನ ಸತ್ತರೆ, 6 ಮಂದಿ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಮೃತಪಟ್ಟಿದ್ದಾರೆ. 27 ಜನ ಗಾಯಾಳುಗಳಲ್ಲಿ ತೀವ್ರ ಗಾಯಗೊಂಡಿದ್ದ 7 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಕಿಂಗ್ ಜಾರ್ಜ್ ಆಸ್ಪತ್ರೆಗೆ ಸೇರಿಸಲಾಯಿತು.

Join Whatsapp