ತಂದೆಯ ತಿಥಿಯ ದಿನವೇ ಮಗಳ ಸಾವು..!

Prasthutha|

ಬೆಂಗಳೂರು: ತಂದೆಯ ತಿಥಿ ಕಾರ್ಯದ ದಿನವೇ ಮಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೆ.ಎಸ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

ಪರಮೇಶ್ವರಿ (42 )  ಎಂಬವರು ಮೃತ ದುರ್ದೈವಿ. ತನ್ನತಂದೆ ಕಾಶಿನಾಥ್ ಅವರ 6ನೇ ವರ್ಷದ ಪುಣ್ಯ ತಿಥಿ ಕಾರ್ಯಕ್ರಮವು ಪರಮೇಶ್ವರಿಯವರ ಮನೆಯಲ್ಲಿ ನಡೆಯುತ್ತಿದ್ದುತಿಥಿ ಕಾರ್ಯಕ್ಕೆ ಮಾಂಸಾಹಾರ ಅಡುಗೆ ಮಾಡಲು ಸಿಲಿಂಡರ್ ತರಿಸಲಾಗಿತ್ತು. ಮನೆ ಚಿಕ್ಕದಾಗಿದ್ದರಿಂದ ಕೋಣೆಯಲ್ಲೇ ಸಿಲಿಂಡರ್ ಇಟ್ಟು ಅಡುಗೆ ಮಾಡಲು ತಯಾರಿ ನಡೆಸಲಾಗುತಿತ್ತು. ಈ ವೇಳೆ ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡು ಪರಮೇಶ್ವರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮನೆಯಲ್ಲಿದ್ದ ಕಾಶಿನಾಥ್ ಪತ್ನಿ ಸೌಭಾಗ್ಯ ( 75) ಮಗ ಶರವಣ(43) ಸಂಬಂಧಿ ಪರಮಶಿವಂ , ( 47)ಪರಮಶಿವಂ ಪತ್ನಿ ಭುವನೇಶ್ವರಿ (40) ಮತ್ತೊಬ್ಬ ಸಂಬಂಧಿ ಮಾಲಾ( 60) ಗಂಭೀರ ಗಾಯಗೊಂಡಿದ್ದುವಿಕ್ಟೋರಿಯಾ ಬರ್ನಿಂಗ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp