ದೇವನೂರು ಮಹಾದೇವ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ ವಿರುದ್ಧ ಗುಡುಗಿದ ದಸಂಸ

Prasthutha|

ಮೈಸೂರು: ದೇವನೂರ್ ಮಹಾದೇವ ಮಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಂಸದ ಪ್ರತಾಪ ಸಿಂಹ ವಿರುದ್ಧ ದಲಿತ ಸಂಘರ್ಷ ಸಮಿತಿ ಗುಡುಗಿದೆ. ಬಾಯಿಗೆ ಬಂದಂತೆ ಮಾತನಾಡಿದರೆ ನಿಮ್ಮ ಮನೆ ಮುಂದೆ ನಿಮ್ಮ ರೀತಿಯಲ್ಲೇ ಉತ್ತರಿಸುತ್ತೇವೆ ಎಂದು ದಸಂಸ ಪದಾಧಿಕಾರಿಗಳು ಪ್ರತಾಪ ಸಿಂಹನ್ನು ಎಚ್ಚರಿಸಿದ್ಧಾರೆ

- Advertisement -

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಅಧಿಕಾರದ ದುರಾಸೆಗಾಗಿ ತನ್ನ ಲೇಖನಿಯನ್ನೇ ಆರೆಸ್ಸೆಸ್ ಗೆ ಅಡವಿಟ್ಟಿರುವ ಪ್ರತಾಪ್ ಸಿಂಹನಿಗೆ ಅಧಿಕಾರದಿಂದ ದೂರವಿರುವ ದೇವನೂರು ಬಗ್ಗೆ ಮಾತನಾಡುವ ಕನಿಷ್ಠ ಯೋಗ್ಯತೆಯೂ ಇಲ್ಲ ಎಂದು ಹೇಳಿದ್ದಾರೆ.

ಆರೆಸ್ಸೆಸ್ ನ ಕೊಳಕನ್ನೆಲ್ಲಾ ಮುಚ್ಚಿಕೊಳ್ಳಲು ದೇವನೂರರಂತಹ ಸರಳ ಸಜ್ಜನ ಸಾಹಿತಿಯನ್ನು ‘ಆಳು’ ಎಂದು ಕರೆದ ಪ್ರತಾಪ ಸಿಂಹ ತಮ್ಮ `ಜಾತಿ ಶ್ರೇಷ್ಟತೆ’ ಯನ್ನು ಪ್ರದರ್ಶಿಸಿದ್ದಾರೆ ಎಂದು ಗುರುಪ್ರಸಾದ್ ಕೆರಗೋಡು ತಿವಿದಿದ್ದಾರೆ.
ಆರೆಸ್ಸೆಸ್ ಜನರನ್ನು ಹೊಡೆದಾಡಿಸಿ ಅಧಿಕಾರ ಹಿಡಿಯುವ ಷಡ್ಯಂತ್ರಕಾರಿ ಸಂಘಟನೆ ಎಂಬ ನಿಜವನ್ನು ದೇವನೂರರು ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ಆದರೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತೆ ಚಾತುರ್ವರ್ಣದ ಸಮರ್ಥನೆಗೆ ಸಂಸದರು ಧಾವಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

- Advertisement -

ಸಹಮಾನವರನ್ನೇ ಅಸ್ಪೃಶ್ಯರು ಎಂದೂ, ಊರಿನ ಜನರ ಜೊತೆ ಬದುಕಲಿಕ್ಕೇ ಅವರು ಅನರ್ಹರು ಎಂದೂ, ಅವರು ವಿದ್ಯೆ, ಸಂಪತ್ತು, ಆಸ್ತಿ ಹೊಂದಬಾರದು ಎಂಬಂತಹ ಹೇಯ ನೀತಿ ಜಗತ್ತಿನ ಯಾವ ಧರ್ಮದಲ್ಲೂ ಇಲ್ಲ. ಇದೇ ಚಾತುರ್ವರ್ಣ ಹಿಂದುತ್ವ. ಇದನ್ನೆ ಬುದ್ಧ, ಮಹಾವೀರ, ಬಸವಣ್ಣ, ವಿವೇಕಾನಂದ, ನಾರಾಯಣ ಗುರು ಮುಂತಾದ ಎಲ್ಲಾ ಸಂತರು ಮತ್ತು ಫುಲೆ, ಅಂಬೇಡ್ಕರರಂತಹ ಸಮಾಜ ಸುಧಾರಕರು ಖಂಡಾತುಂಡವಾಗಿ ವಿರೋಧಿಸಿದ್ದು. ಅವರನ್ನೆಲ್ಲಾ ನೀವು ನಿಂದಿಸಿದ್ದೀರಿ, ಕಾಡಿದ್ದೀರಿ, ಸಹಸ್ರಾರು ಶರಣರನ್ನು ಕೊಂದೇಬಿಟ್ಟಿದ್ದೀರಿ ಎಂದರು.
ಆರ್ಎಸ್ಎಸ್ನ ಒಳ ಸಂಚಿಗೆ ದೇವನೂರು ಕೈಹಾಕಿದ ಕೂಡಲೇ ನೀವು ಮತ್ತು ನಿಮ್ಮ ಪಿತೂರಿ ಗ್ಯಾಂಗ್ ಹೌಹಾರಿದೆ. ಹಾಗಾಗಿಯೇ ಅಂಡು ಸುಟ್ಟ ಬೆಕ್ಕಿನಂತೆ ನೀವು ಆರೆಸ್ಸೆಸ್ ಮತ್ತು ಚತುರ್ವರ್ಣ ನೀತಿಯನ್ನು ಅಸಂಬದ್ಧವಾಗಿ ಸಮರ್ಥಿಸಿಕೊಳ್ಳಲು ಧಾವಿಸಿದ್ದೀರಿ ಎಂದು ದಸಂಸ ರಾಜ್ಯ ಸಂಚಾಲಕ ಕಟುವಾಗಿ ಟೀಕಿಸಿದರು.

Join Whatsapp