ದಲಿತ ಪಂಚಾಯತ್ ಅಧ್ಯಕ್ಷರಿಗೆ ತಮ್ಮ ಕಚೇರಿಯಲ್ಲಿ ಕುರ್ಚಿ ಒದಗಿಸಿಲ್ಲ: ಸಮೀಕ್ಷೆಯಿಂದ ಬಹಿರಂಗ

Prasthutha|

ಚೆನ್ನೈ: ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ವೇದಿಕೆ (ಟಿಎನ್ ಯುಇಎಫ್) ನಡೆಸಿದ ಸಮೀಕ್ಷೆಯಲ್ಲಿ, ರಾಜ್ಯದ ಅನೇಕ ದಲಿತ ಪಂಚಾಯತ್ ಅಧ್ಯಕ್ಷರಿಗೆ ತಮ್ಮ ಕಚೇರಿಗಳಲ್ಲಿ ಕುರ್ಚಿಯನ್ನು ಸಹ ಅನುಮತಿಸಲಾಗಿಲ್ಲ ಎಂಬ ಆಘಾತಕಾರಿ ವಿಷಯ ತಿಳಿದು ಬಂದಿದೆ.

- Advertisement -

ಸಮೀಕ್ಷೆ ನಡೆಸಿದ 386 ಪಂಚಾಯತ್ ಗಳ ಪೈಕಿ 22ರಲ್ಲಿ ದಲಿತ ಅಧ್ಯಕ್ಷರಿಗೆ ಕುರ್ಚಿಗಳನ್ನು ಒದಗಿಸಲಾಗಿಲ್ಲ ಎಂದು ತಿಳಿದು ಬಂದಿದೆ.

ರಾಜ್ಯದ 24  ಜಿಲ್ಲೆಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಅನೇಕ ದಲಿತ ಪಂಚಾಯತ್ ಅಧ್ಯಕ್ಷರಿಗೆ ರಾಷ್ಟ್ರಧ್ವಜವನ್ನು ಹಾರಿಸಲು ಸಹ ಅವಕಾಶ ನೀಡಲಾಗಿಲ್ಲ ಎಂಬ ಆಘಾತಕಾರಿ ಅಂಶ ಕಂಡುಬಂದಿದೆ. ಕೆಲವು ಸಂದರ್ಭಗಳಲ್ಲಿ, ಪಂಚಾಯತ್ ಅಧ್ಯಕ್ಷರಿಗೆ ಸ್ಥಳೀಯ ಸಂಸ್ಥೆ ಕಚೇರಿಗೆ ಪ್ರವೇಶಿಸಲು ಸಹ ಅವಕಾಶವಿರಲಿಲ್ಲ ಮತ್ತು ಅವರಿಗೆ ದಾಖಲೆಗಳಿಗೆ ಮೌಲ್ಯಮಾಪನವನ್ನು ನೀಡಲಾಗಿರಲಿಲ್ಲ ಎಂದು ಕೂಡ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

- Advertisement -

ಗುರುವಾರ ವರದಿಯನ್ನು ಬಿಡುಗಡೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಮೀಕ್ಷೆಯ ನೇತೃತ್ವ ವಹಿಸಿದ್ದ ಟಿಎನ್ ಯುಇಎಫ್ ನ  ಕೆ.ಸ್ಯಾಮ್ಯುಯೆಲ್ ರಾಜ್, ಸಮೀಕ್ಷೆಯ ಫಲಿತಾಂಶವು ಆಘಾತಕಾರಿ ಮತ್ತು ದುಃಖಕರವಾಗಿದೆ. ದೇಶವು ತನ್ನ 75 ನೇ ಸ್ವಾತಂತ್ರ್ಯವನ್ನು ಆಚರಿಸಲು ಸಜ್ಜಾಗಿರುವಾಗ, ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಪೆರಿಯಾರ್ ಅವರ ಸಿದ್ಧಾಂತದ ಆಧಾರದ ಮೇಲೆ ನಿಂತಿರುವ ತಮಿಳುನಾಡಿನಲ್ಲಿ ಜಾತಿ ತಾರತಮ್ಯವು ಪ್ರಚಲಿತದಲ್ಲಿರುವುದನ್ನು ನೋಡುವುದು ದುಃಖಕರವಾಗಿದೆ ಎಂದು ಹೇಳಿದ್ದಾರೆ.

ದಲಿತ ಪಂಚಾಯತ್ ಅಧ್ಯಕ್ಷರ ಕುಂದುಕೊರತೆಗಳನ್ನು ಪರಿಹರಿಸಲು ಪ್ರತ್ಯೇಕ ವ್ಯವಸ್ಥೆಯನ್ನು ರಚಿಸುವಂತೆ ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ” ಎಂದು ಸ್ಯಾಮ್ಯುಯೆಲ್ ರಾಜ್ ಹೇಳಿದ್ದಾರೆ.

Join Whatsapp