ಮುರುಘಾ ಮಠದ ಸ್ವಾಮಿಯನ್ನು ಬಂಧಿಸಲು ದಲಿತ ಸಂಘಟನೆಗಳಿಂದ ಆಗ್ರಹ

Prasthutha|

ಚಿತ್ರದುರ್ಗ: ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

- Advertisement -

ಇಬ್ಬರು ಬಾಲಕಿಯರು ತಮ್ಮ ಹೇಳಿಕೆಗಳನ್ನು ದಾಖಲಿಸಲು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಭದ್ರತೆಯ ನಡುವೆ ಅವರು ಕೆಲವು ಅಧಿಕಾರಿಗಳೊಂದಿಗೆ ಎರಡನೇ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರಾದರು ಮತ್ತು ಅವರ ಹೇಳಿಕೆಗಳನ್ನು ಸಿಆರ್ಪಿಸಿ 164 ರ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದಲಿತ ಸಂಘಟನೆಗಳು ನ್ಯಾಯಕ್ಕಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ ಇಲ್ಲಿ ಪ್ರತಿಭಟನೆ ನಡೆಸಿದ್ದು ಸ್ವಾಮಿಯನ್ನು ಲೈಂಗಿಕ ದೌರ್ಜನ್ಯಗಾರ ಎಂದು ಕರೆದಿದೆ.

- Advertisement -

ಒಬ್ಬ ಸಾಮಾನ್ಯ ವ್ಯಕ್ತಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದರೆ, ಪೊಲೀಸರು ಅವನನ್ನು ಒಂದು ದಿನವೂ ಹೊರಗೆ ಬಿಡುತ್ತಿರಲಿಲ್ಲ, ಆದರೆ ಈ ಸ್ವಾಮಿ ಪ್ರಭಾವಿಯಾಗಿರುವುದರಿಂದ, ಅವರನ್ನು ಇನ್ನೂ ಬಂಧಿಸಲಾಗಿಲ್ಲ. ಕೂಡಲೇ ಅವರನ್ನು ಬಂಧಿಸಬೇಕಿತ್ತು. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಅವರನ್ನು ಪ್ರಶ್ನಿಸುವುದೂ ಇಲ್ಲ ಎಂದು ದಲಿತ ಹೊರಾಟ ಸಮೀತಿ ಜಿಲ್ಲಾಧ್ಯಕ್ಷ ರವಿ ಹೇಳಿದರು.

Join Whatsapp