ಮಸೀದಿ ಮುಂದೆ ಹನುಮಾನ್ ಚಾಲೀಸಾ ಪಠಣಕ್ಕೆ ವಿರೋಧ: ಶ್ರೀರಾಮ ಸೇನೆಗೆ ಎಚ್ಚರಿಕೆ ನೀಡಿದ ದಲಿತ ಸೇನೆ

Prasthutha|

ಕಲಬುರಗಿ: ಆಝಾನ್ ಗೆ ವಿರುದ್ಧವಾಗಿ ಶ್ರೀರಾಮ ಸೇನೆ ಹಮ್ಮಿಕೊಂಡಿರುವ ಸುಪ್ರಭಾತ, ಹನುಮಾನ್ ಚಾಲೀಸಾ ಅಭಿಯಾನಕ್ಕೆ ದಲಿತ ಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಸೀದಿಯ ಮುಂದೆ ಬಂದು ಗೊಂದಲ ಸೃಷ್ಟಿಸಿದರೆ ತಕ್ಕ ಶಾಸ್ತಿ ಮಾಡುವುದಾಗಿ ಎಚ್ಚರಿಸಿದೆ.

- Advertisement -

ದಲಿತ ಸೇನೆಯ ಕಾರ್ಯಕರ್ತರು ಕಲಬುರಗಿಯ ಮೆಹಬಾಸ್ ಮಸೀದಿಯ ಮುಂದೆ ಸರ್ಪಗಾವಲು ನಿರ್ಮಿಸಿ ಮುಸ್ಲಿಮರಿಗೆ ಧೈರ್ಯ ತುಂಬಿದ್ದಾರೆ. ಕಲಬುರಗಿಯ ಸೂಪರ್ ಮಾರ್ಕೆಟ್ ನ ಮೆಹಬಾಸ್ ಮಸೀದಿ ಬಳಿ ದಲಿತ ಸಂಘಟನೆ ಕಾರ್ಯಕರ್ತರು ಮಸೀದಿಗೆ ರಕ್ಷಣೆ ನೀಡಿದ್ದಾರೆ. ಈ ಮೂಲಕ ಶ್ರೀರಾಮಸೇನೆ ಅಭಿಯಾನಕ್ಕೆ ದಲಿತ ಸೇನೆ ಟಕ್ಕರ್ ಕೊಟ್ಟಿದೆ. ಮಸೀದಿ ಸಮೀಪ ಭಜನೆ, ಮಂತ್ರ ಪಠಣಕ್ಕೆ ಅವಕಾಶ ನೀಡಬಾರದು ಎಂದು ದಲಿತ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಇದೇ ಮಸೀದಿ ಸಮೀಪ ಶ್ರೀರಾಮಸೇನೆ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸುವುದಾಗಿ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ದಲಿತ್ ಸೇನೆ ಕಾರ್ಯಕರ್ತರು ರಂಗಕ್ಕಿಳಿದು, ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಮಸೀದಿಗೆ ರಕ್ಷಣೆ ನೀಡಿದ್ದಾರೆ.  ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

Join Whatsapp