ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಎಬಿವಿಪಿ ಸದಸ್ಯರ ಕೈವಾಡವಿದೆ ಎಂದ ಪೊಲೀಸರು

Prasthutha|

ಜೋಧ್ಪುರ: ದಲಿತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ನ ವಿದ್ಯಾರ್ಥಿ ಸಂಘಟನೆಯಾಗಿರುವ ಎಬಿವಿಪಿಯ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ ರಾಜಸ್ಥಾನದಲ್ಲಿ ರಾಜಕೀಯ ಗದ್ದಲವನ್ನು ಹುಟ್ಟುಹಾಕಿದೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪ ಮಾಡುತ್ತಿವೆ.


ಅಜ್ಮೀರ್ ನ 17 ವರ್ಷದ ಬಾಲಕಿ ಶನಿವಾರ ಅಪ್ರಾಪ್ತ ಹುಡುಗನೊಂದಿಗೆ ಮನೆ ಬಿಟ್ಟು ಬಂದಿದ್ದಳು. ಶನಿವಾರ ರಾತ್ರಿ ಬಸ್ ನಲ್ಲಿ ಜೋಧಪುರ ತಲುಪಿದ ಇಬ್ಬರೂ ಬಸ್ ನಿಲ್ದಾಣದ ಬಳಿ ತಂಗಲು ಸ್ಥಳ ಹುಡುಕುತ್ತಿದ್ದರು ಆದರೆ ಅಪ್ರಾಪ್ತರಿಗೆ ತಂಗಲು ಸ್ಥಳ ಸಿಗಲಿಲ್ಲ… ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪಾವಾಟಾ ಸರ್ಕಲ್ ಬಳಿ ಮೂವರು ವ್ಯಕ್ತಿಗಳು ಅವರ ಬಳಿಗೆ ಬಂದು ಅವರಿಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ” ಆರೋಪಿಗಳಾದ ಸಮಂದರ್ ಸಿಂಗ್ (21), ಭಟ್ಟಮ್ ಸಿಂಗ್ (22) ಮತ್ತು ಧರ್ಮಪಾಲ್ ಸಿಂಗ್ (21) ಅವರುಗಳು ಜೆಎನ್ವಿ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಅಪ್ರಾಪ್ತ ಬಾಲಕನನ್ನು ಹಿಡಿದು, ಹಲ್ಲೆ ನಡೆಸಿ ಬಾಯಿಗೆ ಬಟ್ಟೆ ಕಟ್ಟಿದ್ದಾರೆ. ಆ ನಂತರ ಅವರು ಬಾಲಕಿಯ ಮೇಲೆ ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp