ಮೀಸೆ ತಿರುವಿದಕ್ಕಾಗಿ ದಲಿತ ಯುವಕನ ಮೇಲೆ ಮಾರಣಾಂತಿಕ ದಾಳಿ ಮಾಡಿದ ಜಾತಿವಾದಿ ಉಗ್ರರು

Prasthutha|

ಅಹಮದಾಬಾದ್‌ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು 2014ರ ಲೋಕಸಭಾ ಚುನಾವಣೆಗೂ ಮುನ್ನಾ ಸುಳ್ಳು ಸುದ್ದಿಗಳ ಮೂಲಕ ಹರಡಲಾದ ʼಗುಜರಾತ್‌ ಮಾಡೆಲ್‌ʼ ಎಂತಹ ನಿಕೃಷ್ಟವಾದುದು ಎಂಬುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದೆ. ಕೇವಲ ಮೀಸೆ ತಿರುವಿದ ಎಂಬ ಕ್ಷುಲ್ಲಕ ಕಾರಣಕ್ಕಾಗಿ ದಲಿತ ಯುವಕನೊಬ್ಬನಿಗೆ ಜಾತಿವಾದಿ ಉಗ್ರರ ಗುಂಪೊಂದು ಭೀಕರ ಹಲ್ಲೆ ನಡೆಸಿದ ಘಟನೆ ಗುಜರಾತ್‌ ನ ಅಹಮದಾಬಾದ್‌ ನ ವೀರಂಗಂ ತಾಲೂಕಿನಲ್ಲಿ ನಡೆದಿದೆ.

- Advertisement -

ಸುರೇಶ್‌ ವಘೇಲ ಎಂಬಾತ ಹಲ್ಲೆಗೊಳಗಾದ ದಲಿತ ಯುವಕ. ಸುರೇಶ್‌ ಮೇಲೆ 11 ಮಂದಿ ಜಾತಿವಾದಿ ಉಗ್ರರು ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾರೆ, ಜಾತಿ ನಿಂದಿಸಿದ್ದಾರೆ. ಘರ್ಷಣೆಯ ವೇಳೆ ಸಂತ್ರಸ್ತ ಯುವಕನ ಸಹೋದರಿ ಕೂಡ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧೀಸಲಾಗಿದೆ.

ಸುರೇಶ್‌ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ “ಸುರೇಶ್‌ ಜರೂರ್‌ ಮೂಚ್‌ ರಖೇಗಾ (ಸುರೇಶ್‌ ಖಂಡಿತವಾಗಿಯೂ ಮೀಸೆ ಇಡುತ್ತಾನೆ}” ಎಂಬ ಹ್ಯಾಶ್‌ ಟ್ಯಾಗ್‌ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದಾರೆ.

Join Whatsapp