ಕ್ರಿಕೆಟ್ ಬೆಟ್ಟಿಂಗ್ ಚಟ: ಹಣಕ್ಕಾಗಿ ಪತ್ನಿಯನ್ನೇ ಕೊಂದ ಪತಿ

Prasthutha|

ಹಾಸನ: ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಹಣ ಹೊಂದಿಸಲಾಗದೇ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಪತಿಯೊಬ್ಬ ದಾರುಣವಾಗಿ ಕೊಲೆ ಮಾಡಿರುವ ಘಟನೆ ದೊಡ್ಡಮಂಡಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

- Advertisement -

ಟೊಯೊಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಪತ್ನಿ ತೇಜಸ್ವಿನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.

ಆರೋಪಿ ಮಂಜುನಾಥ್ ಗೆ 7 ವರ್ಷಗಳ ಹಿಂದೆ ತೇಜಸ್ವಿನಿ  ಜೊತೆ ಮದುವೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ 150 ಗ್ರಾಂ ಚಿನ್ನ, ಲಕ್ಷಗಟ್ಟಲೆ ನಗದು ಕೊಡಲಾಗಿದೆ. ನಂತರ ಇನ್ನೂ ಹೆಚ್ಚಿನ ವರದಕ್ಷಿಣೆ ತರುವಂತೆ ನನ್ನ ಮಗಳಿಗೆ ಮಂಜುನಾಥ್ ಮತ್ತು ಆತನ ಪೋಷಕರು ಕಿರುಕುಳ ನೀಡಲಾರಂಭಿಸಿದರು. ಈ ವಿಚಾರವಾಗಿ ಅನೇಕ ಬಾರಿ ಗ್ರಾಮಸ್ಥರು ಚರ್ಚಿಸಿ ರಾಜಿ ಮಾಡಿಸಿದ್ದರು ಎಂದು ತೇಜಸ್ವಿನಿ ಪಾಲಕರು ತಿಳಿಸಿದ್ದಾರೆ.

- Advertisement -

ಮಂಜುನಾಥ್ 80 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ. ಆದರೆ ಆನ್ ಲೈನ್ ಜೂಜಾಟ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಗೆ ದಾಸನಾಗಿ ಹಣ ಕಳೆದುಕೊಂಡು  ಕೆಲಸವನ್ನೂ ಕಳೆದುಕೊಂಡ ಆತ ಬಳಿಕ ಬೆಂಗಳೂರಿನಿಂದ ವಾಪಸ್ ಹಾಸನಕ್ಕೆ ಬಂದಿದ್ದ.

ಕುಟುಂಬ ನಿರ್ವಹಣೆಗಾಗಿ ಪತಿ ಕಷ್ಟಪಡುವುದನ್ನು ನೋಡದೆ, ತೇಜಸ್ವಿನಿ ಸಹ ಕೆಲಸಕ್ಕೆ ಹೋಗಲು ಮುಂದಾಗಿದ್ದಾರೆ. ಇದನ್ನು ಸಹಿಸದ ಮಂಜುನಾಥ್, ತೇಜಸ್ವಿನಿ ಶೀಲದ ಮೇಲೆ ಅನುಮಾನಪಟ್ಟು ಆಕೆಯನ್ನು ಮನೆಯ ರೂಮ್ ನಲ್ಲಿ ಕೂಡಿಹಾಕಿ ಬಳಿಕ ತವರು ಮನೆಯಿಂದ ಎಲ್ಲ ಆಸ್ತಿ ಬರೆಯಿಸಿಕೊಂಡು ಬರುವಂತೆ ಹಿಂಸಿಸಿ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದರು.

ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್, ತಾಯಿ ಸರೋಜಮ್ಮ ಹಾಗೂ ತಂದೆ ಬಸವೇಗೌಡರ ಮೇಲೆ ಕಾನೂನು ಕ್ರಮ ಜರುಗಿಸಿ ಕಠಿಣ ಶಿಕ್ಷೆ ಕೊಡುವಂತೆ ಒತ್ತಾಯಿಸಿದ್ದಾರೆ.

Join Whatsapp