SDPI ಕಾರ್ಯಕರ್ತನ ಕೊಲೆಗೆ ಯತ್ನ | ಸಿಪಿಐ(ಎಂ) ಕಾರ್ಯಕರ್ತರ ಕೈವಾಡ ಶಂಕೆ

Prasthutha|

ಕಾಸರಗೋಡು : ಎಸ್ಡಿಪಿಐ ಕಾರ್ಯಕರ್ತನ ಕೊಲೆಗೆ ಯತ್ನಿಸಿದ ಘಟನೆ ಕಾಸರಗೋಡು ಸಮೀಪದ ಕುಂಬಳೆ ಎಂಬಲ್ಲಿ ನಡೆದಿದೆ.ಎಸ್ದಿಪಿಐ ಆರಿಕ್ಕಾಡಿ ಬ್ರಾಂಚ್ ಅಧ್ಯಕ್ಷರಾಗಿರುವ ಝೈನುದ್ದೀನ್ (30) ಎಂಬವರನ್ನು ದುಷ್ಕರ್ಮಿಗಳು ಗಂಭೀರವಾಗಿ ಇರಿದು ಪರಾರಿಯಾಗಿದ್ದಾರೆ.

- Advertisement -

ಅರಿಕ್ಕಾಡಿ ಕಡವತ್ ನಿವಾಸಿ ಝೈನುದ್ದೀನ್(30) ಎಂಬವರ ಮೇಲೆ ಕೊಲೆಯತ್ನ ನಡೆದಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೆ ವೇಳೆ ಘಟನೆ ನಡೆದಿದ್ದು, ಕಾರಿನಲ್ಲಿ ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಲೆಯತ್ನ ನಡೆಸಿ ಪರಾರಿಯಾಗಿದ್ದಾರೆ . ಕುಂಬಳೆ ಠಾಣಾ ಪೋಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರೋಪಿಗಾಗಿ ಶೋಧ ಮುಂದುವರೆದಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಸ್ಡಿಪಿಐ ಸ್ಥಳೀಯ ನಾಯಕರು ಈ ದುಷ್ಕೃತ್ಯದ ಹಿಂದೆ ಸಿಪಿಐ(ಎಂ) ಕಾರ್ಯಕರ್ತರು ಇದ್ದಾರೆ ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.

Join Whatsapp