ಕೋವಿಡ್‌ ಗೆ ಔಷಧಿ ನೀಡಲು ಆಂಧ್ರದ ನಾಟಿ ವೈದ್ಯ ಆನಂದಯ್ಯಗೆ ಸರಕಾರದಿಂದ ಒಪ್ಪಿಗೆ

Prasthutha|

ಅಮರಾವತಿ : ಕೋವಿಡ್‌ ನಿರ್ವಹಣೆಯಲ್ಲಿ ಆಂಧ್ರಪ್ರದೇಶ ಸರಕಾರವು ಸೋಮವಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದ ನಾಟಿ ವೈದ್ಯ ಬೋನಿಗಿ ಆನಂದಯ್ಯ ಎಂಬವರು ಕೋವಿಡ್‌ಗೆ ಸಿದ್ಧಪಡಿಸಿರುವ ಗಿಡಮೂಲಿಕೆ ಔಷಧಿ ಬಳಕೆಗೆ ಸರಕಾರ ಒಪ್ಪಿದೆ.
ಆನಂದಯ್ಯ ಸಿದ್ಧಪಡಿಸಿರುವ ಪಿ, ಎಲ್‌ ಮತ್ತು ಎಫ್‌ ವರ್ಗೀಕೃತ ಔಷಧಿಗಳನ್ನು ವಿತರಿಸಲು ಸರಕಾರ ಅನುಮತಿ ನೀಡಿದೆ. ಆಯುರ್ವೇದ ವಿಜ್ಞಾನ ಕೇಂದ್ರ ಸಂಶೋಧನಾ ಮಂಡಳಿ ಸಲ್ಲಿಸಿದ ಪ್ರಾಥಮಿಕ ಅಧ್ಯಯನ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

- Advertisement -

ಕೋವಿಡ್‌ಗೆ ನಾಟಿ ಔಷಧ ನೀಡುವ ಮೂಲಕ ನೆಲ್ಲೂರಿನ ಆನಂದಯ್ಯ ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದರು ಮತ್ತು ಚರ್ಚೆಗೆ ಕಾರಣವಾಗಿದ್ದರು. ಈಗ ಹಲವು ಪರೀಕ್ಷೆಗಳ ಬಳಿಕ, ಕೆಲವು ಷರತ್ತುಗಳೊಂದಿಗೆ ಆನಂದಯ್ಯ ಅವರ ನಾಟಿ ಔಷಧಿಗೆ ಒಪ್ಪಿಗೆ ದೊರಕಿದೆ.

ಆನಂದಯ್ಯ ಅವರ ನಾಟಿ ಔಷಧಿಯಿಂದ ಯಾವುದೇ ಹಾನಿಯಿಲ್ಲ, ಆದರೆ ಈ ಔಷಧದಿಂದ ಕೋವಿಡ್‌ ಸೋಂಕು ಕಡಿಮೆಯಾಗುತ್ತದೆ ಎಂಬುದಕ್ಕೂ ಪುರಾವೆಗಳಿಲ್ಲ ಎಂದು ಆಯುರ್ವೇದ ವಿಜ್ಞಾನ ಕೇಂದ್ರ ಸಂಶೋಧನಾ ಮಂಡಳಿ ತಿಳಿಸಿದೆ.

Join Whatsapp