ಸಿಡಿ ಸಂತ್ರಸ್ತ ಯುವತಿ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಲು ಕೋರ್ಟ್ ಅಧಿಕೃತ ಅನುಮತಿ

Prasthutha|

ಬೆಂಗಳೂರು : ರಮೆಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿರುವ ಸಂತ್ರಸ್ತ ಯುವತಿಗೆ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆ ದಾಖಲಿಸಲು ಕೋರ್ಟ್ ಅಧಿಕೃತ ಆದೇಶ ನೀಡಿದೆ. 24ನೇ ಎಸಿಎಂಎಂ ನ್ಯಾಯಧೀಶರು ಈ ಕುರಿತು ಆದೇಶ ನೀಡಿದ್ದಾರೆ. ಸಿಆರ್ ಪಿಸಿ ನಿಯಮ 164ರ ಅಡಿಯಲ್ಲಿ ಹೇಳಿಕೆ ಪಡೆಯಲು ಅನುಮತಿ ನೀಡಿದ್ದು, ಯುವತಿ ನ್ಯಾಯಾಲಯಕ್ಕೆ ತನ್ನ ಹೇಳಿಕೆ ನೀಡಿದ ಬಳಿಕ ತನಿಖಾಧಿಕಾರಿಗಳು ಹೇಳಿಕೆ ಪಡೆಯಬಹುದು  ಎಂದು ಕೂಡಾ ನ್ಯಾಯಾಲಯ ಹೇಳಿದೆ. ಈ ವೇಳೆ ತನಿಖಾಧಿಕಾರಿಗಳು ಆಕೆಯ ಮೇಲೆ ಒತ್ತಡ ಹೇರುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಯುವತಿ ಇಂದು ಯಾವುದೇ ಕ್ಷಣದಲ್ಲಿ ಬೇಕಾದರೂ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಇದೆ.

- Advertisement -

ಯುವತಿ ಪರ ವಕೀಲ ಜಗದೀಶ್ ಗೌಡ ವಾದ ಮಂಡನೆ ಮಾಡಿದ್ದು, ಯುವತಿಗೆ ಸಿಟ್ ಮತ್ತು ತನಿಖಾಧಿಕಾರಿಗಳ ಮೇಲೆ ನಂಬಿಕೆಯಿಲ್ಲ. ಹಾಗಾಗಿ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಲು ಅನುಮತಿ ಕೋರಿದ್ದರು. ತನಿಖಾಧಿಕಾರಿ ಕವಿತಾ ಅವರು ಕೂಡಾ ಈ ವೇಳೆ ಹಾಜರಿದ್ದರು

Join Whatsapp