ಮನೆ ತೆರವು ವಿರೋಧಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದ ದಂಪತಿಯ ರಕ್ಷಣೆ

Prasthutha|

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವಿಗೆ ತಡೆವೊಡ್ಡಿ, ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆವೊಡ್ಡಿದ್ದ ದಂಪತಿಯನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

- Advertisement -


ಕೆ. ಆರ್. ಪುರಂನಲ್ಲಿ ಜೆಸಿಬಿ ಘರ್ಜನೆ ಆರಂಭವಾಗಿತ್ತು. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ ಮನೆಗಳನ್ನು ತೆರವುಗೊಳಿಸಲು ಸಿದ್ಧಗೊಂಡಿದ್ದರು. ಆದರೆ ಅಷ್ಟರಲ್ಲೇ ಸೋನಾ ಸೇನ್ ಮತ್ತು ಸುನೀಲ್ ಸಿಂಗ್ ದಂಪತಿ ಕ್ಯಾನ್, ಬಾಟಲಿಯಲ್ಲಿ ಪೆಟ್ರೋಲ್ ಹಿಡಿದುಕೊಂಡು ಒತ್ತುವರಿ ತೆರವುಗೊಳಿಸಲು ವಿರೋಧ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೇ ಸೋನಾ ಸೇನಾ ಪೆಟ್ರೋಲ್ ಸುರಿದುಕೊಂಡಿದ್ದಳು. ಆಕೆಯ ಪತಿ ಸುನೀಲ್ ಸಿಂಗ್ ಲೈಟರ್ ಹಿಡಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ.
ಅಲ್ಲಿದ್ದ ಸ್ಥಳೀಯರು ಬೆಂಕಿ ಹಚ್ಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಯಾರೂ ಏನೇ ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಅಷ್ಟೇ ಅಲ್ಲದೇ ಸೋನಾಳ ಕೈಯಲ್ಲಿದ್ದ ಪೆಟ್ರೋಲ್ ಅನ್ನು ತೆಗೆದು ತನ್ನ ಪತಿ ಸುನೀಲ್ ಸಿಂಗ್ ಗೂ ಹಾಕಿದ್ದಾಳೆ.


ಇದೇ ರೀತಿ ದಂಪತಿ ಸತತ 2 ಗಂಟೆಗಳ ಹೈಡ್ರಾಮಾ ನಡೆಸಿದ್ದಾರೆ. ಕೊನೆಗೂ ಈ ಹೈಡ್ರಾಮಾಕ್ಕೆ ಪೊಲೀಸರು ಸಿನಿಮಾ ರೀತಿಯಲ್ಲೇ ನೀರೆರೆಚುವ ಮೂಲಕ ಬ್ರೇಕ್ ಹಾಕಿದ್ದಾರೆ. ದಂಪತಿ ಬೆದರಿಕೆ ಹಾಕುತ್ತಿದ್ದ ವೇಳೆ ಜನರ ಸಹಾಯವನ್ನು ಪಡೆದು ಮೊದಲಿಗೆ ಕಾಂಪೌಂಡ್ ಹಿಂದಿನಿಂದ ಸೋನಾ ಸೇನಾಗೆ ಬಕೆಟ್ ನಲ್ಲಿ ನೀರು ಹಾಕಿ ಮೇಲಕ್ಕೆತ್ತಿದ್ದಾರೆ. ಇತ್ತ ಅಗ್ನಿಶಾಮಕ ವಾಹನ ಬಂದು ಪತಿ ಸುನೀಲ್ ಗೂ ಬೆಂಕಿ ನಂದಿಸುವ ಸೋಪು ದ್ರಾವಣ ಹಾಯಿಸಿ ರಕ್ಷಣೆ ಮಾಡಿದ್ದಾರೆ.
ಘಟನೆ ಸಂಬಂಧ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತ್ಮಹತ್ಯೆಗೆ ಯತ್ನ ಅಡಿಯಲ್ಲಿ ಹಾಗೂ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ

Join Whatsapp