ಮೆಜೆಸ್ಟಿಕ್’ನಲ್ಲಿ ಓಡಾಡುತ್ತಿದ್ದ ಬಾಲಕನನ್ನು ಪೋಷಕರ ಮಡಿಲಿಗೆ ಒಪ್ಪಿಸಿದ ಪೇದೆ: ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

Prasthutha|

ಬೆಂಗಳೂರು: ಬೊಮ್ಮಸಂದ್ರದ ಮನೆಯಿಂದ ತಪ್ಪಿಸಿಕೊಂಡು ಮೆಜೆಸ್ಟಿಕ್’ನಲ್ಲಿ ಓಡಾಡುತ್ತಿದ್ದ ಬಾಲಕನೊಬ್ಬನನ್ನು ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಗಮನಿಸಿ ಆತನ ಮನವೊಲಿಸಿ ವಾಪಸ್ ಆತನ ಮನೆಗೆ ತಲುಪಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

- Advertisement -


ಚಿಕ್ಕಪೇಟೆ ಸಂಚಾರ ಪೊಲೀಸ್ ಕಾನ್ಸ್’ಟೇಬಲ್ ಶ್ರೀಕಾಂತ್ ಸೂಳೆಬಾವಿ ಅವರು ಬಾಲಕನನ್ನು ಮರಳಿ ಪೋಷಕರ ಮಡಿಲಿಗೆ ತಲುಪಿಸಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.


ಕಳೆದ ರಾತ್ರಿ ಕಾನ್ಸ್ ಟೇಬಲ್ ಶ್ರೀಕಾಂತ್ ಸೂಳೆಬಾವಿ ಅವರು ಕರ್ತವ್ಯದಲ್ಲಿದ್ದಾಗ ಮೆಜೆಸ್ಟಿಕ್’ನಲ್ಲಿ ಒಬ್ಬಂಟಿಯಾಗಿ ಓಡಾಡುತ್ತಿದ್ದ ಬಾಲಕನನ್ನು ಕರೆದು ವಿಚಾರಿಸಿದ್ದಾರೆ. ಆಗ ಈ ಬಾಲಕ ಬೊಮ್ಮಸಂದ್ರದಿಂದ ತಪ್ಪಿಸಿಕೊಂಡಿರುವುದಾಗಿ ಹೇಳಿದ್ದಾನೆ. ಕೂಡಲೇ ಈತನ ಪೋಷಕರನ್ನು ಸಂಪರ್ಕಿಸಿದ ಸಂಚಾರ ಕಾನ್ಸ್’ಟೇಬಲ್, ಪೋಷಕರಿಗೆ ಬಾಲಕನನ್ನು ಒಪ್ಪಿಸಿದ್ದಾರೆ. ಕಾನ್ಸ್ ಟೇಬಲ್ ಶ್ರೀಕಾಂತ್ ಸಮಯಪ್ರಜ್ಞೆಗೆ ಹಿರಿಯ ಅಧಿಕಾರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -


ಬೊಮ್ಮಸಂದ್ರ ದಿಂದ ಕಳೆದುಹೋಗಿದ್ದ ಬಾಲಕನನ್ನು ಠಾಣಾ ಸರಹದ್ದಿನ ಮೆಜೆಸ್ಟಿಕ್ ನಲ್ಲಿ ವಿಚಾರಿಸಿ ಬಾಲಕನ ತಂದೆಯನ್ನು ಸಂಪರ್ಕಿಸಿ ಅವರ ವಶಕ್ಕೆ ಒಪ್ಪಿಸಿರುತ್ತಾರೆ.

Join Whatsapp