ಮಲತಾಯಿ ಕೊಲೆಗೆ ಸಂಚು: ವಕೀಲನಿಗೆ ಇರಿತ, ಬಂಧನ

Prasthutha|

ಕೊಪ್ಪಳ: ತನ್ನ ತಂದೆ, ಮಲತಾಯಿಯನ್ನು ಕೊಲೆ ಮಾಡಿಸಲು ಹಂತಕರನ್ನು ಕರೆಯಿಸಿ ಸಂಚು ಹಾಕಿದ್ದ ಬೆಂಗಳೂರಿನ ವಕೀಲನನ್ನು ಗಂಗಾವತಿ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಅಲ್ಲದೆ ತಾನು ನಿಗದಿಪಡಿಸಿದ ಬಾಡಿಗೆ ಹಂತಕರಿಂದಲೇ ವಕೀಲ ಇರಿತಕ್ಕೊಳಗಾಗಿದ್ದು, ಇದೀಗ ಕಂಬಿ ಎಣಿಸುವಂತಾಗಿದೆ.

- Advertisement -

ಬೆಂಗಳೂರಿನ ಯಶವಂತಪುರದ ವಕೀಲ ಯೋಗೇಶ್ವರ ಬಂಧಿತ ಆರೋಪಿಯಾಗಿದ್ದು, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಇಲ್ಲಿನ ಜಯನಗರದಲ್ಲಿರುವ ತಂದೆ ಮನೋಹರ ದೇಸಾಯಿ ಮತ್ತು ಮಲತಾಯಿ ಕರ್ಣಂ ಕಲಾವತಿ ಅವರನ್ನು ಕೊಲೆ ಮಾಡಲು ಹಂತಕರನ್ನು ಕರೆಯಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಕೊಪ್ಪಳ ತಾಲೂಕಿನ ಕವಲೂರು ಮೂಲದ ಆರೋಪಿ ಯೋಗೇಶ್ವರಗೆ ತಂದೆಯ ಜೊತೆ ಆಸ್ತಿ ವಿವಾದ ಇತ್ತು. ಗಂಗಾವತಿಯಲ್ಲಿ ಇರುವ ತನ್ನ ತಂದೆ ಮನೋಹರ ದೇಸಾಯಿ ಮತ್ತು ತಾಯಿ ಕರ್ಣಂ ಕಲಾವತಿ ಅವರ ಕೊಲೆ ಮಾಡಿಸುವ ಉದ್ದೇಶದಿಂದ ಬೆಂಗಳೂರಿನಿಂದ ಫಯಾಝ್ ಮತ್ತು ಇನ್ನೋರ್ವ ವ್ಯಕ್ತಿಯನ್ನು ಕರೆದುಕೊಂಡು ಬಂದು ಕೊಲೆಗೆ ಸಂಚು ರೂಪಿಸಿದ್ದಾನೆ. ಕಳೆದ ನ.18ರ ರಾತ್ರಿ ಜಯನಗರದ ಯೋಗೇಶ್ವರ ತಂದೆ ನಿವಾಸಕ್ಕೆ ಆಗಮಿಸಿ ಸಮಯ ಕಾದಿದ್ದಾನೆ. ಅಲ್ಲದೇ ಹಂತಕರಿಗೆ 3 ಲಕ್ಷ ರೂ. ನೀಡುವುದಾಗಿ ಹೇಳಿ .1.50 ರೂ. ಲಕ್ಷ ತೋರಿಸಿದ್ದಾನೆ.

- Advertisement -

ಇದರಿಂದ ಕೆರಳಿದ ಹಂತಕರು ಯೋಗೇಶ್ವರನಿಗೇ ಚೂರಿಯಿಂದ ಇರಿದು ಕಾರಿನಿಂದ ಕೆಳಗೆ ದೂಡಿ ಹಾಕಿ ಪರಾರಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಗಸ್ತು ಮಾಡುತ್ತಿದ್ದ ಪೋಲಿಸರು ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ವಕೀಲ ಯೋಗೇಶ್ವರ ತನ್ನ ಪುರಾಣವನ್ನು ಬಾಯಿ ಬಿಟ್ಟಿದ್ದಾನೆ. ಇದೀಗ ಯೋಗೇಶ್ವರನನ್ನು ಪೊಲೀಸರು ಬಂಧಿಸಿದ್ದು, ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Join Whatsapp