ಉಳ್ಳಾಲ: ಕಾಂಗ್ರೆಸ್ ವತಿಯಿಂದ ಐಕ್ಯತಾ ತಿರಂಗಾ ಯಾತ್ರೆ

Prasthutha|

ಉಳ್ಳಾಲ: ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಕಲ್ಲಾಪುವಿನಿಂದ ಮುಡಿಪುವರೆಗೆ ಐಕ್ಯತಾ ತಿರಂಗಾ ಯಾತ್ರೆ ಮಂಗಳವಾರ ನಡೆಯಿತು.

- Advertisement -


ಐಕ್ಯತಾ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.


ಈ ಸಂದರ್ಭ ಮಾತನಾಡಿದ ಶಾಸಕ ಯು.ಟಿ. ಖಾದರ್, ತಿರಂಗ ದೇಶದ ಏಕತೆಯ ಪ್ರತೀಕವಾಗಿದ್ದು, ಆದು ಪ್ರತಿಯೋರ್ವ ಭಾರತೀಯನ ಹೃದಯದಲ್ಲಿ ಅರಳುತ್ತಿದೆ. ಜನರು ರಾಷ್ಟ್ರ ಧ್ವಜಕ್ಕೆ ಗೌರವ ನೀಡಬೇಕು. ಇದು ಜನವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆಯಾಗಿದೆ. ಶಾಂತಿ, ಸಾಮರಸ್ಯ ಈ ದೇಶದಲ್ಲಿ ಇರಬೇಕು, ಎಂದು ಹೇಳಿದರು.

- Advertisement -




Join Whatsapp