ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಪ್ರತಿಭಟನೆ

Prasthutha|

ನವದೆಹಲಿ: ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಧ್ವನಿ ಎತ್ತಿದ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

- Advertisement -
https://twitter.com/scribe_prashant/status/1443221054470561793

“ಜಿ-23” ಎಂಬ ಬಂಡಾಯ ನಾಯಕರು “ಜಿ ಹುಜೂರ್” ಮಾಡಲು ಸಿದ್ಧರಿಲ್ಲ. ನಾವು ಪಕ್ಷದ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ ಎಂದು ಸಿಬಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಪಕ್ಷದಲ್ಲಿ ಅಧ್ಯಕ್ಷರೇ ಇಲ್ಲ, ಹಾಗಾಗಿ ಯಾರು ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬುದು ಗೊತ್ತೇ ಆಗುತ್ತಿಲ್ಲ ಎಂದು ಸಿಬಲ್ ಕಾಂಗ್ರೆಸ್ ನಾಯಕತ್ವದ ಬಗ್ಗೆ ಕುಟುಕಿದ್ದರು.

ಕಪಿಲ್ ಸಿಬಲ್ ನಿವಾಸದ ಮುಂದೆ ‘ಬೇಗ ಗುಣಮುಖರಾಗಿ, ಕಪಿಲ್ ಸಿಬಲ್’ ಎಂದು ಬರೆಯಲಾದ ಭಿತ್ತಿಪತ್ರ ಹಿಡಿದು ಪಕ್ಷದ ಕಾರ್ಯಕರ್ತರು ಘೋಷಣೆ ಕೂಗಿದರು.

- Advertisement -

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅವರು ಟ್ವೀಟ್ ಮಾಡಿ, “ಸುನಿಯೇ ಜಿ-ಹುಜೂರ್, ನೀವು ಸಂಸತ್ತು ತಲುಪುವವರೆಗೆ ಪಕ್ಷದ ಅಧ್ಯಕ್ಷರು ಯಾರೆಂದು ನಿಮಗೆ ಗೊತ್ತಿತ್ತು, ಪಕ್ಷ ಅಧಿಕಾರದಲ್ಲಿದ್ದಾಗ ನಿಮ್ಮನ್ನು ಮಂತ್ರಿ ಮಾಡಿದ್ದು ಯಾರು ?, ಪಕ್ಷವು ವಿರೋಧ ಪಕ್ಷದಲ್ಲಿದ್ದಾಗ ಯಾರು ನಿಮ್ಮನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರು. ಮತ್ತು ಈಗ ಹೋರಾಟದ ಸಮಯ ಬಂದಾಗ … ” ಎಂದು ಕುಟುಕಿದ್ದಾರೆ.

Join Whatsapp