ಕಾಂಗ್ರೆಸ್ ನಿಂದ ಅಹೋರಾತ್ರಿ ಧರಣಿ: ಸದನದ ಸಭಾಂಗಣದಲ್ಲೇ ಮಲಗಿದ ಕೈ ಶಾಸಕರು

Prasthutha|

ಬೆಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಕೈ ಶಾಸಕರು ಸದನ ಸಭಾಂಗಣದ ನೆಲದಲ್ಲೇ ಹಾಸಿಗೆ ಹಾಸಿ ಮಲಗಿದರು.

- Advertisement -

 ಧರಣಿನಿರತ ಕೈ ಶಾಸಕರಿಗೆ ಭೂಜನ ಹಾಗೂ ಹಾಸಿಗೆ ವ್ಯವಸ್ಥೆಯನ್ನು ವಿಧಾನಸಭೆ ಸಚಿವಾಲಯವೇ ಕಲ್ಪಿಸಿದೆ. ಹಾಸಿಗೆ, ದಿಂಬು, ಬೆಡ್ ಶೀಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸುಮಾರು 80 ಬೆಡ್  ಗಳನ್ನು ಪೂರೈಸಿಲಾಗಿದೆ. ಸದನದೊಳಗೆ ಆಸನದ ಮಧ್ಯೆ ಲಭ್ಯವಿರುವ ಜಾಗದಲ್ಲಿ ಹಾಸಿಗೆಗಳನ್ನು ಹಾಸಲಾಗಿದೆ. ಭೋಜನ ಸವಿದ ಕೈ ಶಾಸಕರು ಬಳಿಕ ವಿಧಾನಸಭೆ ಸಭಾಂಗಣದಲ್ಲೇ ಹಾಸಿಗೆ ಹಾಸಿ ಮಲಗಿದರು.

 ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪರ ಮನವೊಲಿಕೆಗೂ ಒಪ್ಪದ ಕಾಂಗ್ರೆಸ್ ಶಾಸಕರು ಧರಣಿ ಮುಂದುವರಿಸಿದ್ದಾರೆ.

Join Whatsapp