ಶೋಭಾ ಕರಂದ್ಲಾಜೆ ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ | ಕಾಂಗ್ರೆಸ್ ಟೀಕೆ

Prasthutha|

ಬೆಂಗಳೂರು : ಬಿಜೆಪಿಯೇತರ ಸರಕಾರವಿರುವಾಗ ಎಲ್ಲಿಯೇ ಕೊಲೆ ನಡೆಯಲಿ, ಸುಲಿಗೆ ನಡೆಯಲಿ, ಅತ್ಯಾಚಾರ ನಡೆಯಲಿ ಅಲ್ಲಿಗೆ ರಣಹದ್ದುಗಳಂತೆ ಹಾರಿಬಂದು ಸರಕಾರವೇ ಕಾರಣವೆಂದು ಎಗರಿ ಬೀಳುತ್ತಿದ್ದಿರಲ್ಲ ಶೋಭಾ ಕರಂದ್ಲಾಜೆ ಅವರೇ, ಉತ್ತರದಾಯಿತ್ವದ ಸ್ಥಾನ ಸಿಕ್ಕಮೇಲೆ ಬಾಯಿ ಮುಚ್ಚಿಕೊಳ್ಳುವ ನೀವು ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ ಅಷ್ಟೇ!’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

- Advertisement -

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಪ್ರವಾಸಿ ತಾಣದ ಬಳಿಯೇ ಪೊಲೀಸ್ ರಕ್ಷಣೆ ಇಲ್ಲದಿರುವುದು ಒಂದು ವೈಫಲ್ಯವಾದರೆ, ಮೂರು ದಿನಗಳು ಕಳೆದರೂ ಆರೋಪಿಗಳನ್ನು ಹಿಡಿಯಲಾಗದ್ದು ಮತ್ತೊಂದು ವೈಫಲ್ಯ. ತಮ್ಮ ವೈಫಲ್ಯ ಮರೆಮಾಚಲು ರಮೇಶ್ ಜಾರಕಿಹೊಳಿ ಪ್ರಕರಣದ ಸಂತ್ರಸ್ತೆಯಂತೆ ಈ ಸಂತ್ರಸ್ತೆಯನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದೆ ದುಷ್ಟ ಬಿಜೆಪಿ ಸರಕಾರ’ ಎಂದು ಟೀಕಿಸಿದೆ.

ಬಿಜೆಪಿಯವರು ಬಡ ಮಕ್ಕಳ ಮೊಟ್ಟೆ ತಿನ್ನಬಹುದು, ಬಿಜೆಪಿಯವರು ಬಡಮಕ್ಕಳ ಸ್ವೆಟರ್ ನುಂಗಬಹುದು, ಬಿಜೆಪಿಯವರು ಬಳ್ಳಾರಿಯ ಮಣ್ಣು, ಬೆಂಗಳೂರಿನ ನೆಲವನ್ನ ತಿನ್ನಬಹುದು, ಬಿಜೆಪಿಯವರು ಲೂಟಿಯ ಹಣ ತಿನ್ನಬಹುದು, ಬಿಜೆಪಿಯ ಉಮೇಶ್ ಕತ್ತಿ ಸದನದಲ್ಲಿ ಗುಟ್ಕಾ ತಿನ್ನಬಹುದು. ಆದರೆ, ಬಡಜನತೆ ಮಾತ್ರ 5 ಕೆಜಿಗಿಂತ ಹೆಚ್ಚು ಅಕ್ಕಿ ತಿನ್ನಬಾರದು!! ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆಗೂ ಕೂಡ ಕಾಂಗ್ರೆಸ್ ತೀಕ್ಷ್ಣವಾಗಿ ತಿರುಗೇಟು ನೀಡಿದೆ.

Join Whatsapp