ಜನರೆದುರು ಬೆತ್ತಲಾದ ಬಿಜೆಪಿಯ ಧರ್ಮ ಪ್ರೇಮದ ಡೋಂಗಿತನ: ಕಾಂಗ್ರೆಸ್

Prasthutha|

ಬೆಂಗಳೂರು: ಹಿಂದೂ ಧರ್ಮದ ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುತ್ತಾ, ಸುಳ್ಳುಗಳಿಂದ ಇತರ ಪಕ್ಷಗಳಿಗೆ ಹಿಂದೂ ವಿರೋಧಿ ಪಟ್ಟ ಕಟ್ಟುತ್ತ ತನ್ನ ರಾಜಕೀಯ ಅಸ್ತಿತ್ವ ಕಂಡುಕೊಂಡ ಬಿಜೆಪಿ ಸರ್ಕಾರವೇ ಜಿಲ್ಲಾಡಳಿತಗಳಿಗೆ ದೇವಾಲಯಗಳ ತೆರವಿಗೆ ಆದೇಶ ನೀಡಿ ಗಪ್ ಚುಪ್ ಆಗಿ ಕುಳಿತಿದೆ. ಬಿಜೆಪಿಯ ಧರ್ಮ ರಕ್ಷಣೆಯ ಡೋಂಗಿತನ ಬಯಲಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

- Advertisement -


ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಧರ್ಮಕ್ಕಾಗಿ ಜೀವವನ್ನೇ ಬಿಡ್ತೇವೆ ಎಂದು ಭಯಂಕರ ಭಾಷಣ ಬಿಗಿಯುತ್ತಿದ್ದ ಬಿಜೆಪಿ ನಾಯಕರಿಗೆ ಈಗ ಸದಾವಕಾಶ! ಆದರೆ ಈಗ ಎಲ್ಲಿ ಅಡಗಿ ಕುಳಿತಿದ್ದಾರೋ ದೇವರೇ ಬಲ್ಲ! ಧರ್ಮವನ್ನು ರಾಜಕೀಯ ಲಾಭಕ್ಕೆ ಬಳಸುವ #ಹಿಂದೂವಿರೋಧಿಬಿಜೆಪಿ ನಾಯಕರ ಗಂಟಲಲ್ಲಿ ಕಸ ಈಗ ಏಕೆ ಕಸ ಸಿಕ್ಕಿಕೊಂಡಿದೆ!? ಜನರೆದುರು ಬಿಜೆಪಿಯ ಧರ್ಮ ಪ್ರೇಮದ ಡೋಂಗಿತನ ಬೆತ್ತಲಾಗಿದೆ ಎಂದು ಕುಟುಕಿದೆ.


ಒಂದು ಕಡೆ ಡೋಂಗಿ ಧಾರ್ಮಿಕತೆಯ ಬಿಜೆಪಿ ಸರ್ಕಾರವೇ ದೇವಾಲಯ ತೆರವಿಗೆ ಆದೇಶ ಹೊರಡಿಸುತ್ತದೆ, ಮತ್ತೊಂದು ಕಡೆ ತೆರವುಗೊಳಿಸಿದ್ದೇಕೆ ಎಂದು ತಾನೇ ಅಧಿಕಾರಿಗಳಿಗೆ ನೋಟಿಸ್ ನೀಡುತ್ತದೆ. ಇನ್ನೊಂದು ಕಡೆ ತಾನೇ ತನ್ನ ಮಿತ್ರ ಸಂಘಟನೆಗಳನ್ನು ಛೂ ಬಿಟ್ಟು ಗುಲ್ಲೆಬ್ಬಿಸುತ್ತದೆ. #ಹಿಂದೂವಿರೋಧಿಬಿಜೆಪಿ ಯ ಸದಾರಮೆ ನಾಟಕ ಚೆನ್ನಾಗಿದೆ! ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Join Whatsapp