ನಾನ್ ಸಿಆರ್ ಝಡ್ ಪ್ರದೇಶದ ಮರಳು ಗುತ್ತಿಗೆದಾರರ ಸಭೆ: ವೇ ಬ್ರೀಜ್ ಅಳವಡಿಸಲು ಕಾಲಾವಕಾಶ ಕೋರಿಕೆ

Prasthutha|

ಮಂಗಳೂರು: ದ.ಕ. ಜಿಲ್ಲೆಯ ನಾನ್ ಸಿಆರ್ ಝಡ್ ಪ್ರದೇಶದ ಮರಳು ಗುತ್ತಿಗೆದಾರರ ಸಭೆ ಸೋಮವಾರ ಮಂಗಳೂರು ಕದ್ರಿ ಜುಗುಲ್ ಸಭಾ ಭವನದಲ್ಲಿ ನಡೆಯಿತು.

- Advertisement -


ದ.ಕ. ಮರಳು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದಿನೇಶ್ ಮೆಧು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ನಾನ್ ಸಿಆರ್ ಝಡ್ ಪ್ರದೇಶದಲ್ಲಿ ಇರುವ ಗುತ್ತಿಗೆದಾರರಿಗೆ ಇರುವ ನಿಯಮದಲ್ಲಿ ವೇ ಬ್ರೀಜ್ ಅಳವಡಿಸಲು 3 ತಿಂಗಳ ಕಾಲಾವಕಾಶವನ್ನು ಕೇಳುವುದೆಂದು ತೀರ್ಮಾನಿಸಲಾಯಿತು.


ಗುತ್ತಿಗೆದಾರರಿಗೆ ಒಟ್ಟು ಮರಳಿನ ಪ್ರಮಾಣದ ಶೇ.50ರಷ್ಟು ರಾಜಧನ ಪಾವತಿ ಮಾಡಲು ಆದೇಶ ಇರುತ್ತದೆ. ಆದರೆ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ಇರುವುದರಿಂದ ನಾನ್ ಸಿಆರ್ ಝಡ್ ಗುತ್ತಿಗೆದಾರರಿಗೆ ಮರಳಿನ ಬೇಡಿಕೆ ಇಲ್ಲದಂತಾಗಿದೆ. ಆದುದರಿಂದ ನಮಗೆ ಹೊರಜಿಲ್ಲೆಗೆ ಪರವಾನಿಗೆ ನೀಡಬೇಕು ಹಾಗೂ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಲಾಯಿತು.

- Advertisement -


ಜಿಲ್ಲೆಯ ಎಲ್ಲಾ ಗ್ರಾಹಕರಿಗೆ ಪಾರದರ್ಶಕವಾಗಿ ಕಾನೂನಿನ ಅಡಿಯಲ್ಲಿ ಮರಳು ನೀಡಲು ನಾವು ಬದ್ಧರಿದ್ದೇವೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಚರಣ್ ಕುಮಾರ್, ಪ್ರ.ಕಾರ್ಯದರ್ಶಿ ಚಂದ್ರಹಾಸ ಪಲ್ಲಿಪಾಡಿ, ನ್ಯಾಯಾಲಯದ ಮೊರೆಹೋದ ರಾಜೇಂದ್ರ ಮೆಂಡ, ಕೋಶಾಧಿಕಾರಿ ಸುರೇಶ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

Join Whatsapp