ಕಾಂಗ್ರೆಸ್ ಕೇವಲ ಒಂದು ಕುಟುಂಬಕ್ಕೆ ಸೀಮಿತವಲ್ಲ: ಕಪಿಲ್ ಸಿಬಲ್

Prasthutha|

ಹೊಸದಿಲ್ಲಿ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕತ್ವ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ, ಈ ಸೋಲಿನಿಂದ ತನಗೇನೂ ಆಶ್ಚರ್ಯವಾಗಿಲ್ಲ ಎಂದು ಕಪಿಲ್ ಸಿಬಲ್ ಹೇಳಿದರು.

- Advertisement -

ಎಂಟು ವರ್ಷಗಳಿಂದ ಮಾಡದ ‘ಚಿಂತನ ಶಿಬಿರ’ ಗೆ ಇನ್ನು ಮಾಡಿ ಏನೂ ಪ್ರಯೋಜನವಿಲ್ಲ. ನಾಯಕರ ಮನಸ್ಸಿನಲ್ಲಿ ಚಿಂತನ ಶಿಬಿರ’ ನಡೆಯಬೇಕಾಗಿತ್ತು. ಕಾಂಗ್ರೆಸ್ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ,ಎಲ್ಲರಿಗೂ ಸೇರಿದ ಪಕ್ಷವಾಗಿದೆ ಎಂದು ಹೇಳಿದರು .

ರಾಹುಲ್ ಗಾಂಧಿ ಇಲ್ಲದ ಅಧಿಕಾರ ಬಳಸುತ್ತಿದ್ದಾರೆ. ಪಂಜಾಬ್ ಗೆ ಬಂದು ಚನ್ನಿಯನ್ನು ಮುಖ್ಯಮಂತ್ರಿ ಎಂದು ಘೋಷಿಸಲು ಯಾವ ಅಧಿಕಾರವಿದೆ ಎಂದು ಕಪಿಲ್ ಸಿಬಲ್ ಪ್ರಶ್ನಿಸಿದರು. ನಾಯಕತ್ವ ಬದಲಾಗದೆ ಕೇವಲ  ಸುಧಾರಣಾ ಕ್ರಮಗಳಿಂದ ಮಾತ್ರ ಯಾವುದೇ ಪ್ರಯೋಜನವಿಲ್ಲ ಎಂದು ಕಪಿಲ್ ಸಿಬಲ್ ಹೇಳಿದರು.

- Advertisement -

ರಾಹುಲ್ ಗಾಂಧಿಯವರು ಒಮ್ಮೆ ಸೋಲಿನ ಜವಾಬುದಾರಿ ಹೊತ್ತು ರಾಜೀನಾಮೆ ನೀಡಿದರು. ಇಷ್ಟು ಹಳೆಯ ಪಕ್ಷಕ್ಕೆ ಒಬ್ಬ ಬದಲಿ ನಾಯಕನನ್ನು ಹುಡುಕಿಕೊಳ್ಳಲು ಆಗಲಿಲ್ಲ ಎಂದರೆ ಏನರ್ಥ? ನನಗೆ ಬೇಡ ಎಂದಾಗಲೂ, ನೀವೇ ಇರಿ ಎಂಬ ನಾಟಕ ಮತ್ತೊಮ್ಮೆ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ನಡೆಯಿತು. ಇದು ಖಂಡಿತ ಪಕ್ಷಕ್ಕೆ ಒಳಿತುಂಟು ಮಾಡುವುದಿಲ್ಲ ಎಂದು ಸಿಬಲ್ ಹೇಳಿದರು. 

Join Whatsapp