ಕಾಂಗ್ರೆಸ್ ವಿಶಾಲ ಮನಸ್ಸಿನ ಪಕ್ಷ, ಬಡವರ ಸೌಲಭ್ಯದಲ್ಲಿ ರಾಜಕೀಯ ಮಾಡಲ್ಲ: ಇನಾಯತ್ ಅಲಿ

Prasthutha|

ಮಂಗಳೂರು : ರಾಜ್ಯ ಸರಕಾರದ ಐದು ಗ್ಯಾರಂಟಿಗಳ ಸೇವಾ ಸೌಲಭ್ಯಗಳು, ಯಾವುದೇ ಜಾತಿ ಮತ ಪಕ್ಷಬೇಧವಿಲ್ಲದೆ ಸಿಗುವಂತಾಗಬೇಕು, ಬಡವರಿಗೆ ಸಿಗಬೇಕಾದ ಸೌಲಭ್ಯದಲ್ಲಿ ನಾವು ಯಾವುದೇ ರಾಜಕೀಯವನ್ನು ಮಾಡುವುದಿಲ್ಲ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದರು.

- Advertisement -


ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮುಲ್ಲಕಾಡು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ರವಿವಾರ ಇಂದಿರಾ ಸೇವಾ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಎಲ್ಲ ಪಕ್ಷವನ್ನು ಬೆಂಬಲಿಸುವವರಲ್ಲಿ ಬಡವರು ಆರ್ಥಿಕವಾಗಿ ಹಿಂದುಳಿದವರು ಇರುತ್ತಾರೆ. ನಮ್ಮದೇನಿದ್ದರೂ ವಿಶಾಲವಾದ ಮನಸ್ಸಿನ ಕಾಂಗ್ರೆಸ್ ಪಕ್ಷವಾಗಿದೆ. ಸಂಕುಚಿತ ಮನೋಭಾವವನ್ನು ನಾವು ಹೊಂದಿಲ್ಲ ಎಂದರು.


ಮುಂಬರುವ ಲೋಕಸಭೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬರಬೇಕು. ಹೀಗಾದಾಗ ಜನರಿಗೆ ಮತ್ತಷ್ಟು ಗ್ಯಾರಂಟಿ ಸಹಿತ ಬದುಕುವ ವಾತಾವರಣ ನಿರ್ಮಾಣವಾಗಲಿದೆ ಎಂದು ಇನಾಯತ್ ಅಲಿ ಹೇಳಿದರು.

Join Whatsapp