ದಲಿತರನ್ನು ಕಾಂಗ್ರೆಸ್ ‘ಬಲಿಪಶು’ಗಳನ್ನಾಗಿ ಮಾಡಿದೆ: ಮಾಯಾವತಿ

Prasthutha|

ಲಕ್ನೋ: ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಒಂದು ದಿನದ ನಂತರ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಗುರುವಾರ 137 ವರ್ಷಗಳಷ್ಟು ಹಳೆಯದಾದ ಪಕ್ಷವು ತನ್ನ ಕೆಟ್ಟ ಸಮಯದಲ್ಲಿ ಮಾತ್ರ ದಲಿತರನ್ನು ನೆನಪಿಸಿಕೊಳ್ಳುತ್ತಿದೆ ಮತ್ತು ಅವರನ್ನು “ಬಲಿಪಶುಗಳನ್ನಾಗಿ” ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

- Advertisement -

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಯಾವತಿ, “ದೀನದಲಿತ ಪರಂ ಪೂಜ್ಯ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಮತ್ತು ಅವರ ಸಮಾಜವನ್ನು ಅದು ಯಾವಾಗಲೂ ನಿರ್ಲಕ್ಷಿಸಿದೆ ಎಂಬುದಕ್ಕೆ ಕಾಂಗ್ರೆಸ್ ನ ಇತಿಹಾಸವು ಸಾಕ್ಷಿಯಾಗಿದೆ. ಈ ಪಕ್ಷವು ತನ್ನ ಒಳ್ಳೆಯ ದಿನಗಳಲ್ಲಿ ದಲಿತರ ಸುರಕ್ಷತೆ ಮತ್ತು ಗೌರವವನ್ನು ನೆನಪಿಸಿಕೊಳ್ಳುವುದಿಲ್ಲ, ಆದರೆ ಕೆಟ್ಟ ದಿನಗಳಲ್ಲಿ ಅವರನ್ನು ಬಲಿಪಶುವನ್ನಾಗಿ ಮಾಡುತ್ತದೆ ಎಂದರು.

ಕರ್ನಾಟಕದ ಬಲಿಷ್ಟ ದಲಿತ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ (80) ಅವರು ನಾಲ್ಕು ದಿನಗಳ ಹಿಂದೆ ನಡೆದ ಐತಿಹಾಸಿಕ ಚುನಾವಣೆಯಲ್ಲಿ ತಮ್ಮ 66 ವರ್ಷದ ಪ್ರತಿಸ್ಪರ್ಧಿ ಶಶಿ ತರೂರ್ ಅವರನ್ನು ಸೋಲಿಸಿ 24 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ಮೊದಲ ಗಾಂಧಿಯೇತರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Join Whatsapp