ಪಟಾಕಿ ನಿಯಮ ಕಾಂಗ್ರೆಸ್ ಸರ್ಕಾರದ ಹುನ್ನಾರ: ವೇದವ್ಯಾಸ ಕಾಮತ್

Prasthutha|

ಮಂಗಳೂರು: ಸರ್ಕಾರ ಪಟಾಕಿ ಸಂಬಂಧವಾಗಿ ಹೊಸ ನಿಯಮ ಹೊರಡಿದ್ದು ರಾಜ್ಯ ಸರ್ಕಾರದ ಹುನ್ನಾರ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಬಣ್ಣಿಸಿದ್ದಾರೆ.

- Advertisement -

ಹತ್ತು ಹಲವು ನೆಪವೊಡ್ಡಿ ಹಬ್ಬದ ಸಂಭ್ರಮದ ವಾತಾವರಣಕ್ಕೆ ಅಡ್ಡಿ ಮಾಡಲಾಗುತ್ತಿದೆ. ಹಿಂದೂಗಳ ಹಬ್ಬ ಸಂದರ್ಭದಲ್ಲಿಯೇ ತೊಂದರೆ ಮಾಡುತ್ತಿದ್ದಾರೆ. ಈ ಮೂಲಕ ತನ್ನ ಎಂದಿನ ಚಾಳಿಯನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಶುರುಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರ ಪ್ರಾಣರಕ್ಷಣೆಗೆ ಸರ್ಕಾರ ನಿಯಮ ಮಾಡಿದ್ದರೂ ಬಿಜೆಪಿಗರಿಗೆ ರಾಜಕೀಯ ಮುಖ್ಯವಾಗಿದ್ದು, ಪಟಾಕಿ ನಿಯಮಗಳನ್ನು ಹಿಂದುಗಳ ಭಾವನೆಯೊಂದಿಗೆ ತಳುಕು ಹಾಕಿಸುವ ಹೇಯ ಕೃತ್ಯ ಮಾಡುತ್ತಿದ್ದಾರೆಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.



Join Whatsapp