ಗ್ಯಾರಂಟಿ ಯೋಜನೆಗಳನ್ನು ಮನೆ ಮನೆ ತಲುಪಿಸಲು ಕಾಂಗ್ರೆಸ್ ಸರಕಾರ ಬದ್ಧವಾಗಿದೆ: ಇನಾಯತ್ ಅಲಿ

Prasthutha|

ಮಂಗಳೂರು: ಗ್ಯಾರಂಟಿ ಯೋಜನೆಗಳನ್ನು ಮನೆ ಮನೆ ತಲುಪಿಸಲು ಕಾಂಗ್ರೆಸ್ ಸರಕಾರ ಬದ್ಧವಾಗಿದೆ ಎಂದು ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದ್ದಾರೆ.

- Advertisement -

ಚುನಾವಣೆ ಪೂರ್ವ ಪ್ರನಾಳಿಕೆಯಲ್ಲಿ ನೀಡಿದ ಆಶ್ವಾಸನೆ ಈಡೇರಿಸಲು ಹಾಗೂ ಅರ್ಹರ ಮನೆ ಮನೆಗೆ ಸೌಲಭ್ಯ ತಲುಪಿಸಲು ಕಾಂಗ್ರೆಸ್ ಸರಕಾರ ಬದ್ಧವಾಗಿದೆ. ಈಗಾಗಲೇ ಪ್ರಥಮ ಹೆಜ್ಜೆ ಇರಿಸಲಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಕದ ಆಶ್ವಾಸನೆಗಳನ್ನು ಶೇ. ನೂರರಷ್ಟು ಈಡೇರಿಸುತ್ತಾರೆ. ಅಧಿಕಾರಿಗಳಿಗೆ ಅರ್ಹರ ಪಟ್ಟಿ ಹಾಗೂ ಮಾರ್ಗಸೂಚಿ ತಯಾರಿ ನಡೆಯುತ್ತಿದ್ದು, ಇದರ ಪರಿಪೂರ್ಣ ಅನುಷ್ಠಾನಕ್ಕೆ ಕಾರ್ಯಕರ್ತರೂ ಕೂಡ ಕೈ ಜೋಡಿಸಬೇಕಿದೆ. ಬಡ ವರ್ಗದವರ, ಅರ್ಹರನ್ನು ಗುರುತಿಸಿ ಈ ಯೋಜನೆ ಕೈ ಸೇರುವಂತೆ ಮಾಡಬೇಕು. ಯೋಜನೆ ಜಾರಿ ಮಾಡಿದ ಸರಕಾರ ಹಾಗೂ ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp