ಕೊರೋನಾದಿಂದ ಪಾಠ ಕಲಿಯದ ಸರ್ಕಾರಕ್ಕೆ ತಜ್ಞರ ಸಲಹೆಗಳು ‘ಗೋರ್ಕಲ್ಲ ಮೇಲೆ ಮಳೆ ಸುರಿದಂತೆ’ : ಕಾಂಗ್ರೆಸ್ ವ್ಯಂಗ್ಯ

Prasthutha|

ಬೆಂಗಳೂರು : ಕೊರೋನಾದಿಂದ ಕಿಂಚಿತ್ತೂ ಪಾಠ ಕಲಿಯದ ರಾಜ್ಯ ಸರ್ಕಾರಕ್ಕೆ ತಜ್ಞರ ಸಲಹೆಗಳು ‘ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಅಷ್ಟೇ’ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಕೊರೋನಾದಿಂದ ಕಿಂಚಿತ್ತೂ ಪಾಠ ಕಲಿಯದ ರಾಜ್ಯ ಸರ್ಕಾರಕ್ಕೆ ತಜ್ಞರ ಸಲಹೆಗಳು ‘ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಅಷ್ಟೇ’ ಟೆಸ್ಟಿಂಗ್‌ನಲ್ಲೂ ಫೇಲ್ ಟ್ರಾಕಿಂಗ್‌ನಲ್ಲೂ ಫೇಲ್, ಟ್ರೀಟಿಂಗ್‌ನಲ್ಲೂ ಫೇಲ್, ಬೌದ್ಧಿಕವಾಗಿ ದಿವಾಳಿಯಾದ ಈ ಸೋಂಕಿತ ಸರ್ಕಾರಕ್ಕೆ ಕೊರೋನಾ ನಿರ್ವಹಿಸುವ ಕನಿಷ್ಠ ಇಚ್ಚಾಶಕ್ತಿಯೂ ಇಲ್ಲ. ಕಾರ್ಯಸೂಚಿಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Join Whatsapp