ಸೆಂಚುರಿ ಕ್ಲಬ್ ನಲ್ಲಿ ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯೆಗೆ ಜೀವ ಬೆದರಿಕೆ; ಕಾರ್ಯದರ್ಶಿ, ಅಧ್ಯಕ್ಷ, ಖಜಾಂಚಿ ವಿರುದ್ದ ಪೋಲಿಸ್ ಠಾಣೆಗೆ ದೂರು

Prasthutha|

ಬೆಂಗಳೂರು: ಪ್ರತಿಷ್ಟಿತ ಸೆಂಚುರಿ ಕ್ಲಬ್ ನಲ್ಲಿ   ಮಹಳಾ ಸಮಿತಿ ಸದಸ್ಯರೊಬ್ಬರು ಅಧ್ಯಕ್ಷರು, ಕಾರ್ಯದರ್ಶಿ,  ಖಚಾಂಚಿಗಳು ತಮ್ನಗೆ ನಿರಂತರ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆ ದೂರು ನೀಡಿರುವ  ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

- Advertisement -

ಸೆಂಚುರಿ ಕ್ಲಬ್ ನ  ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಚಿತ್ತಕಲಾ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆ ದೂರು ನೀಡಿರುವ ಮಹಿಳೆ ಯಾಗಿದ್ದು, ಅಧ್ಯಕ್ಷ ಸುರೇಶ್ ನಾಯ್ಡು, ಕಾರ್ಯದರ್ಶಿ ಜಯದೀಪ್, ಖಚಾಂಚಿ ಗುರು ಪ್ರಸನ್ನ, ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಗಂಗಾಧರ್ ವಿರುದ್ದ ದೂರು ನೀಡಿದ್ದಾರೆ.

ಸೆಂಚುರಿ ಕ್ಲಬ್ ನ 47 ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಖಚಾಂಚಿ ಯವರು ನಿರಂತರ ದಬ್ಬಾಳಿಕೆ ಮಾಡುತ್ತಿದ್ದು. ನಮ್ಮ  ಹೇಳಿಕೆ, ಮಾತುಗಳಿಗೆ ಮಾನ್ಯತೆ ನೀಡುತ್ತಿಲ್ಲ. ಯಾವುದೇ ವಿಚಾರಗಳನ್ನು ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುವದಲ್ಲದೇ ಜೀವ ಬೆದರಿಕೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

- Advertisement -

ಕ್ಲಬ್ ನ ಕಾರ್ಯದರ್ಶಿ, ಖಚಾಂಚಿಯವರು ನೀಡಿರುವ ಬೆದರಿಕೆ ಬಗ್ಗೆ ಅಧ್ಯಕ್ಷರಿಗೆ ದೂರು ಪತ್ರ ನೀಡಿದ್ದರೂ ಇದುವರೆಗೂ ಯಾವುದೇ ರೀತಿಯ ಕ್ರಮ ಕೈ ಗೊಂಡಿಲ್ಲ ಎಂದು ಪೋಲಿಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

Join Whatsapp