ಶಿವಮೊಗ್ಗದಲ್ಲಿ ಕೋಮುದ್ವೇಷ ಹರಡಿದ ಹಿನ್ನೆಲೆ : ಈಶ್ಚರಪ್ಪ ವಿರುದ್ಧ ಬೆಂಗಳೂರು ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲು

Prasthutha|

ಬೆಂಗಳೂರು: ಇತ್ತೀಚೆಗೆ ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ನಡೆದ ಸಂದರ್ಭದಲ್ಲಿ, ನಿಷ್ಕಾರಣವಾಗಿ ಎರಡು ಭಿನ್ನ ಕೋಮುಗಳ ನಡುವೆ ಕೋಮುದ್ವೇಷ ಹರಡಿ, ಅಶಾಂತಿ ಸೃಷ್ಡಿಸಿದ್ದಾರೆ ಎಂದು ಆರೋಪಿಸಿ ಸಚಿವ ಈಶ್ವರಪ್ಪ ವಿರುದ್ಧ ಬೆಂಗಳೂರು ವಿಶೇಷ ನ್ಯಾಯಾಲಯದಲ್ಲಿ ಪಿಸಿಆರ್ ದೂರು ದಾಖಲಾಗಿದೆ.

- Advertisement -

ಶಿವಮೊಗ್ಗದ ಪೀಸ್ ಆರ್ಗನೈಝೇಶನ್ ಮುಖಂಡ ರಿಯಾಝ್ ಅಹಮದ್ ದೂರು ದಾಖಲಿಸಿದ್ದಾರೆ.

ಹರ್ಷ ಕೊಲೆಗೆ ಮುಸ್ಲಿಂ ಜನಾಂಗವೇ ಕಾರಣ ಎಂಬ ದ್ವೇಷಪೂರಿತ ಹೇಳಿಕೆ ನೀಡುವ ಮೂಲಕ ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸಿ , ಅಮಾಯಕರನ್ನು ಕೆರಳಿಸಿ, ಕೋಮು ಸಂಘರ್ಷಕ್ಕೆ ಅನುವು ಮಾಡಿಕೊಟ್ಟಿರುವ ಈಶ್ವರಪ್ಪ ವಿರುದ್ಧ ಅಪರಾಧ ಪ್ರಕ್ರಿಯೆ ಸಂಹಿತೆ ಕಲಂ 200ರಡಿ ದೂರನ್ನು ದಾಖಲಿಸಲಾಗುತ್ತಿದೆ’ ಎಂದು ರಿಯಾಝ್ ನೀಡಿದ ದೂರಲ್ಲಿ ಈ ಅಂಶಗಳು ಒಳಗೊಂಡಿದೆ.

Join Whatsapp