ಮುಂಬರುವ ಲೋಕಸಭೆ, ಸ್ಥಳೀಯ ಸಹಿತ ತ್ರಿಬಲ್ ಎಂಜಿನ್ ಸರ್ಕಾರ ನಮ್ಮದೇ ಬರಬೇಕು: ಇನಾಯತ್ ಅಲಿ

Prasthutha|

ಮುಲ್ಲಕಾಡು ಇಂದಿರಾ ಸೇವಾ ಕೇಂದ್ರ ಉದ್ಘಾಟನೆ

- Advertisement -

ಕಾವೂರು: ಮುಂಬರುವ ಲೋಕಸಭೆ, ಹಾಗೂ ಸ್ಥಳೀಯ ಮಂಗಳೂರು ಮಹಾನಗರ ಪಾಲಿಕೆ ಸಹಿತ ಡಬಲ್, ತ್ರಿಬಲ್ ಎಂಜಿನ್‌ ಸರಕಾರ ಕಾಂಗ್ರೆಸ್ ಪಕ್ಷದ್ದೇ ಬರಬೇಕು. ಹೀಗಾದಾಗ ದೇಶದ ಹಾಗೂ ಸಾರ್ವಜನಿಕರಿಗೆ ಮತ್ತಷ್ಟು ಗ್ಯಾರಂಟಿ ಸಹಿತ ಬದುಕುವ ವಾತಾವರಣ ನಿರ್ಮಾಣವಾಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದ್ದಾರೆ.

ಮುಲ್ಲಕಾಡು ಫ್ರೆಂಡ್ಸ್ ಕ್ಲಬ್ ಇದರ ಸಭಾಂಗಣದಲ್ಲಿ ರವಿವಾರ ಇಂದಿರಾ ಸೇವಾ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಐದು ಗ್ಯಾರಂಟಿಗಳ ಸೇವಾ ಸೌಲಭ್ಯಗಳು, ಯಾವುದೇ ಜಾತಿ ಮತ ಪಕ್ಷಬೇಧವಿಲ್ಲದೆ ಸಿಗುವಂತಾಗಬೇಕು. ಸೌಲಭ್ಯದಲ್ಲಿ ನಾವು ಯಾವುದೇ ರಾಜಕೀಯವನ್ನು ಮಾಡುವುದಿಲ್ಲ, ಎಲ್ಲ ಪಕ್ಷವನ್ನು ಬೆಂಬಲಿಸುವವರಲ್ಲಿ ಬಡವರು ಆರ್ಥಿಕವಾಗಿ ಹಿಂದುಳಿದವರು ಇರುತ್ತಾರೆ. ನಮ್ಮದೇನಿದ್ದರೂ ವಿಶಾಲವಾದ ಮನಸ್ಸಿನ ಕಾಂಗ್ರೆಸ್ ಪಕ್ಷವಾಗಿದೆ. ಸಂಕುಚಿತ ಮನೋಭಾವವನ್ನು ನಾವು ಹೊಂದಿಲ್ಲ ಎಂದರು.



Join Whatsapp